ಚುನಾವಣೆಗೆ ಮುನ್ನ ‘ನೂತನ, ಉತ್ತಮ ನಾಯಕತ್ವ’ಕ್ಕೆ ಇದು ಸಕಾಲ: ಮೋದಿ ವಿರುದ್ಧ ಶತ್ರುಘ್ನ ಸಿನ್ಹಾ ದಾಳಿ

Update: 2019-03-14 16:42 GMT

ಹೊಸದಿಲ್ಲಿ,ಮಾ.14: ಗುರುವಾರ ಪ್ರಧಾನಿ ನರೇಂದ್ರ ಮೋದಿಯವರ ವಿರುದ್ಧ ತೀವ್ರ ದಾಳಿಯನ್ನು ನಡೆಸಿರುವ ಬಿಜೆಪಿ ಸಂಸದ ಶತ್ರುಘ್ನ ಸಿನ್ಹಾ ಅವರು,‘ಸರಕಾರ ಬದಲಾಗುವ’ ಮುನ್ನ ‘ನೂತನ,ಉತ್ತಮ ನಾಯಕತ್ವ’ಕ್ಕೆ ಇದು ಸಕಾಲವಾಗಿದೆ ಎಂದು ಕರೆ ನೀಡಿದ್ದಾರೆ.

‘‘ಸರಕಾರವು ಬದಲಾಗುವ ಮುನ್ನ ನೂತನ,ಉತ್ತಮ ನಾಯಕತ್ವವು ಹೊಣೆಯನ್ನು ವಹಿಸಿಕೊಳ್ಳಲು ಇದು ಸೂಕ್ತ ಸಮಯವೆಂದು ನಿಮಗೆ ಅನ್ನಿಸುತ್ತಿಲ್ಲವೇ? ನೀವು ನಿಮ್ಮ ಎಲ್ಲ ಬಣ್ಣಗಳಿಂದ ಹೊರಬರಬೇಕು ’’ಎಂದು ಪರೋಕ್ಷವಾಗಿ ಮೋದಿಯವರನ್ನು ಉದ್ದೇಶಿಸಿ ಸಿನ್ಹಾ ಟ್ವೀಟಿಸಿದ್ದಾರೆ.

ಪ್ರಧಾನಿಯವರು ಕಳೆದೊಂದು ತಿಂಗಳಲ್ಲಿ ದೇಶದ ವಿವಿಧ ಭಾಗಗಳಲ್ಲಿ 150 ಯೋಜನೆಗಳನ್ನು ಪ್ರಕಟಿಸಿದ್ದಾರೆ ಎಂದಿರುವ ಸಿನ್ಹಾ,‘‘ತಾಂತ್ರಿಕವಾಗಿ ಹೇಳುವುದಾದರೆ ಇದು ಚುನಾವಣಾ ನೀತಿ ಸಂಹಿತೆಗೆ ವಿರುದ್ಧವಲ್ಲದಿರಬಹುದು, ಆದರೆ ಇದು ಖಂಡಿತವಾಗಿಯೂ ಅತಿ ವಿಳಂಬಿತ ‘ಜುಮ್ಲಾ’ಗಳಂತೆ ಕಂಡು ಬರುತ್ತಿದೆ. ಆದರೂ ನಿಮ್ಮ ಮೆಳ್ಳೆಗಣ್ಣಿನ ಧೋರಣೆಯ ಹೊರತಾಗಿಯೂ ನಿಮಗೆ ಯಶಸ್ಸನ್ನು ಹಾರೈಸುತ್ತೇನೆ ’’ಎಂದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News