ವಿಜಯಪುರ: ಪಿಯುಸಿ ಪರೀಕ್ಷೆಯಲ್ಲಿ ನಕಲು; ಹತ್ತು ವಿದ್ಯಾರ್ಥಿಗಳು ಡಿಬಾರ್

Update: 2019-03-14 17:41 GMT

ವಿಜಯಪುರ,ಮಾ.14: ಜಿಲ್ಲೆಯ ಮುದ್ದೇಬಿಹಾಳ ಪಟ್ಟಣದ ಜ್ಞಾನ ಭಾರತಿ ಪರೀಕ್ಷಾ ಕೇಂದ್ರದಲ್ಲಿ ಪಿಯುಸಿ ಪರೀಕ್ಷೆಯಲ್ಲಿ ನಕಲು ಮಾಡುತ್ತಿದ್ದ ಹತ್ತು  ವಿದ್ಯಾರ್ಥಿಗಳನ್ನು ಉಪವಿಭಾಗಾಧಿಕಾರಿ ಡಿಬಾರ್ ಮಾಡಿದ ಘಟನೆ ನಡೆದಿದೆ.

ವಿಜಯಪುರ ಉಪವಿಭಾಗಾಧಿಕಾರಿ ರುದ್ರೇಶ್ ನೇತೃತ್ವದಲ್ಲಿ ದಿಢೀರ್ ಭೇಟಿ ನೀಡಿ ನಕಲು ಮಾಡುತ್ತಿದ ವಿದ್ಯಾರ್ಥಿಗಳನ್ನು ಅಮಾನತು ಮಾಡಲಾಗಿದೆ. ಇದೇ ಸಂದರ್ಭದಲ್ಲಿ ಪರೀಕ್ಷಾ ಮೇಲ್ವಿಚಾರಕ ಎಸ್.ಬಿ ಮ್ಯಾಗೇರಿ, ಬಿ.ಎಸ್ ಬಿರಾದಾರ, ಎಸ್.ಎಸ್ ಶಿವಾಚಾರ್ಯ ಪರೀಕ್ಷಾ ಕೇಂದ್ರದ ಮೇಲ್ವಿಚಾರಕರಾದ ಟಿ ಎ ಹೇರಕಳ ಅವರನ್ನೂ ಕೂಡಾ ಪರೀಕ್ಷಾ ಕೇಂದ್ರದಿಂದ ವಜಾಗೊಳಿಸಲಾಗಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News