ಕೌಟುಂಬಿಕ ಸಮಸ್ಯೆ ಹಿನ್ನೆಲೆ: ತಾಯಿ-ಮಗಳು ಆತ್ಮಹತ್ಯೆ

Update: 2019-03-15 16:01 GMT

ಚಿಕ್ಕಮಗಳೂರು, ಮಾ.13: ಕೌಟುಂಬಿಕ ಸಮಸ್ಯೆಯಿಂದ ಬೇಸತ್ತು ತಾಯಿ ಮಗಳು ನೇಣಿ ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜಿಲ್ಲೆಯ ಅಜ್ಜಂಪುರ ಪಟ್ಟಣದಲ್ಲಿ ಗುರುವಾರ ಸಂಜೆ ವರದಿಯಾಗಿದೆ.

ಶಿಕ್ಷಕಿ ಸ್ವಪ್ನಾ(32) ಹಾಗೂ ಆಕೆಯ ತಾಯಿ ಸುಧಾ(55) ಆತ್ಮಹತ್ಯೆಗೆ ಶರಣಾದವರೆಂದು ತಿಳಿದು ಬಂದಿದ್ದು, ವಿವಾಹಿತರಾಗಿದ್ದ ಸ್ವಪ್ನಾರಿಗೆ ಮಕ್ಕಳಾಗಿರದ ಕಾರಣಕ್ಕೆ ಪತಿಯಿಂದ ಬೇರ್ಪಟ್ಟು ಇತ್ತೀಚೆಗೆ ಅಜ್ಜಂಪುರ ಪಟ್ಟಣದ ತನ್ನ ತಾಯಿ ಮನೆಗೆ ಬಂದು ನೆಲೆಸಿದ್ದರು. ಪಟ್ಟಣ ಸಮೀಪದ ಗಿರಿಯಾಪುರ ಗ್ರಾಮದ ಶಾಲೆಯೊಂದರಲ್ಲಿ ಶಿಕ್ಷಕಿಯಾಗಿದ್ದ ಸ್ವಪ್ನಾ ಗುರುವಾರ ಸಂಜೆ ಮನೆಯಲ್ಲಿ ತನ್ನ ತಾಯಿಯೊಂದಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಶರಣಾಗಿದ್ದಾರೆಂದು ತಿಳಿದು ಬಂದಿದೆ.

ಅಜ್ಜಂಪುರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದು, ಆತ್ಮಹತ್ಯೆ ಸಂಬಂಧ ಹೆಚ್ಚಿನ ಮಾಹಿತಿ ತನಿಖೆಯಿಂದ ತಿಳಿದು ಬರಬೇಕಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News