ಕಾಲುವೆಗೆ ಉರುಳಿದ ಟ್ರಾಕ್ಟರ್: ಓರ್ವ ಮೃತ್ಯು, ಚಾಲಕನಿಗೆ ಗಂಭೀರ
Update: 2019-03-16 04:51 GMT
ಮುಂಡಗೋಡ, ಮಾ.16: ಟ್ರಾಕ್ಟರ್ ಕಾಲುವೆಗೆ ಉರುಳಿಬಿದ್ದ ಪರಿಣಾಮ ವ್ಯಕ್ತಿಯೋರ್ವ ಸ್ಥಳದಲ್ಲೇ ಮೃತಪಟ್ಟು ಚಾಲಕ ಗಂಭೀರ ಗಾಯಗೊಂಡ ಘಟನೆ ತಾಲೂಕಿನ ಚಿಗಳ್ಳಿ ಗ್ರಾಮದಲ್ಲಿ ನಡೆದಿದೆ
ಚಿಗಳ್ಳಿ ಗ್ರಾಮದ ಸಂದೀಪ್ ಬಂಕಾಪುರ ಮೃತಪಟ್ಟವರಾಗಿದ್ದಾರೆ. ಟ್ರಾಕ್ಟರ್ ಚಾಲಕ ದೀಪಕ ವಡ್ಡರ ತೀವ್ರವಾಗಿ ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಟ್ರಾಕ್ಟರ್ ಚಿಗಳ್ಳಿ ಜಲಾಶಯದ ಕಡೆಗೆ ಹೋಗುತ್ತಿದ್ದ ವೇಳೆ ಚಾಲಕನ ನಿಯಂತ್ರಣ ತಪ್ಪಿ ಕಾಲುವೆಗೆ ಉರುಳಿದೆ. ಈ ವೇಳೆ ಟ್ರಾಕ್ಟರ್ ಅಡಿಗೆ ಸಿಲುಕಿದ ಸಂದೀಪ್ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಈ ಕುರಿತು ಮುಂಡಗೋಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.