ಬೈಕ್‌ಗಳ ಮುಖಾಮುಖಿ ಢಿಕ್ಕಿ: ಓರ್ವ ಸವಾರ ಸಾವು

Update: 2019-03-16 04:57 GMT

ಮುಂಡಗೋಡ, ಮಾ.16: ಎರಡು ಬೈಕ್ ಗಳ ನಡುವೆ ಮುಖಾಮುಖಿ ಢಿಕ್ಕಿ ಸಂಭವಿಸಿ ಓರ್ವ ಸವಾರ ಸ್ಥಳದಲ್ಲಿಯೇ ಮೃತಪಟ್ಟ ಘಟನೆ ತಾಲೂಕಿನ ಇಂದೂರ ಗ್ರಾಮದ ಹತ್ತಿರ ಸಂಭವಿಸಿದೆ

  ಮೃತರನ್ನು ಶಿಗಾಂವ ತಾಲೂಕಿನ ಮುದ್ದಿನಕೊಪ್ಪ ಗ್ರಾಮದ ಪರಮೇಶ್ ಓಣಿಕೇರಿ ಎಂದು ಗುರುತಿಸಲಾಗಿದೆ.

ಪರಮೇಶ್ ಸಹಸವಾರ ರಾಜೂ ವಾಲಿಕರ್ ಜತೆ ಕಲಘಟಗಿ ಕಡೆಗೆ ಬೈಕಿನಲ್ಲಿ ಸಂಚರಿಸುತ್ತಿದ್ದಾಗ ಎದುರಿನಿಂದ ಲಕ್ಷ್ಮಣ್ ಲಮಾಣಿ ಎಂವರು ಸಹ ಸವಾರ ನೀಲಾ ಜತೆ ಮುಂಡಗೋಡದತ್ತ ಬರುತ್ತಿದ್ದ ವೇಳೆ ಈ ಅಪಘಾತ ಸಂಭವಿಸಿದೆ. ಇಂದೂರಿನ ಧರ್ಮ ಹೊಟೆಲ್ ಬಳಿ ಎರಡು ಬೈಕ್‌ಗಳು ಮುಖಾಮುಖಿ ಢಿಕ್ಕಿಯಾಗಿದ್ದು, ಅಪಘಾತದ ತೀವ್ರತೆಗೆ ಪರಮೇಶ್ ಓಣಿಕೇರಿ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ ಎಂದು ಹೇಳಲಾಗಿದೆ.

ಘಟನೆಯಲ್ಲಿ ಲಕ್ಷ್ಮಣ್ ಲಮಾಣಿ ಸಹಸವಾರರಾದ ರಾಜೂ ವಾಲಿಕರ್ ಮತ್ತು. ನೀಲಾ ಗಾಯಗೊಂಡಿದ್ದಾರೆ.
ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News