ಶಾಸಕ ಹರತಾಳು ಹಾಲಪ್ಪ ಕಾರು ಅಪಘಾತ

Update: 2019-03-16 12:29 GMT

ಸಾಗರ,ಮಾ.16: ಶಾಸಕ ಹರತಾಳು ಹಾಲಪ್ಪ ಪ್ರಯಾಣಿಸುತ್ತಿದ್ದ ಕಾರು ಅಪಘಾತಕ್ಕೀಡಾದ ಘಟನೆ ಸಾಗರ ತಾಲೂಕಿನ ಕಾಸ್ಪಾಡಿ ಬಳಿ ಸಂಜೆ 4:30 ರ ಸುಮಾರಿಗೆ ನಡೆದಿದೆ.

ಸಾಗರದಿಂದ ಶಿವಮೊಗ್ಗ ಕಡೆಗೆ ಹೊರಟಿದ್ದ ಶಾಸಕರ ಕಾರು, ಕಾಸ್ಪಾಡಿ ಬಳಿ ತಲುಪಿದಾಗ ಅಪಘಾತಕ್ಕೀಡಾಗಿದೆ. ಟಿಲ್ಲರ್ ಗೆ ಢಿಕ್ಕಿ ಹೊಡೆಯುವುದನ್ನು ತಪ್ಪಿಸಲು ಹೋಗಿ ಕಾರು ಚರಂಡಿಗೆ ಇಳಿದಿದೆ ಎಂದು ತಿಳಿದು ಬಂದಿದೆ. ಕಾರಿನಲ್ಲಿ ಶಾಸಕ ಹರತಾಳು ಹಾಲಪ್ಪ ಹಾಗೂ ಆಪ್ತ ಸಹಾಯಕರಿದ್ದರು ಎನ್ನಲಾಗಿದ್ದು, ಯಾವುದೇ ಗಾಯಗಳಿಲ್ಲದೇ ಅಪಾಯದಿಂದ ಪಾರಾಗಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News