ಎಸ್.ಎಂ.ಕೃಷ್ಣ ವಿರುದ್ಧ ಎಚ್ಡಿಕೆ ಹೇಳಿಕೆಗೆ ಯಡಿಯೂರಪ್ಪ ಆಕ್ರೋಶ
Update: 2019-03-16 16:35 GMT
ಬೆಂಗಳೂರು, ಮಾ.16: ಹಿರಿಯ ರಾಜಕೀಯ ಮುತ್ಸದ್ಧಿ, ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಬಗ್ಗೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅಧಿಕಾರ ದುರಹಂಕಾರದ ಮದದಿಂದ ಮಾಡಿರುವ ಟೀಕೆಯು ಮುಖ್ಯಮಂತ್ರಿಯ ಘನತೆಗೆ ತಕ್ಕದಾದುದಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರಾಜಕೀಯ ಅನುಭವದಲ್ಲಿ ಎಸ್.ಎಂ.ಕೃಷ್ಣ ಮತ್ತು ಕುಮಾರಸ್ವಾಮಿ ಅವರಿಗೆ ಹೋಲಿಕೆಯೇ ಇಲ್ಲ. ಕುಮಾರಸ್ವಾಮಿ ಅವರಿಗೆ ವಿನಾಶಕಾಲೇ ವಿಪರೀತ ಬುದ್ಧಿ ಎನ್ನುವಂತೆ ಆಗಿದೆ. ಮಂಡ್ಯದಲ್ಲಿ ಪುತ್ರನನ್ನು ಗೆಲ್ಲಿಸುವುದು ಸಾಧ್ಯವಿಲ್ಲ ಎನ್ನುವುದು ಅರ್ಥವಾದ ನಂತರ, ಅವರು ಹತಾಶರಾಗಿದ್ದಾರೆ. ಮಂಡ್ಯದ ಜನತೆ ಈ ಅಹಂಕಾರದ ವರ್ತನೆಗೆ ಮುಖ್ಯಮಂತ್ರಿ ಕುಟುಂಬಕ್ಕೆ ತಕ್ಕ ಪಾಠ ಕಲಿಸುತ್ತಾರೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.