ಆನಂದಪುರ: ಕಾರು ಅಪಘಾತ; ಸ್ಥಳದಲ್ಲೇ ಓರ್ವ ಮೃತ್ಯು

Update: 2019-03-17 04:18 GMT

ಸಾಗರ, ಮಾ. 17: ಆನಂದಪುರ ಬಳಿಯ ಬೈರಾಪುರದಲ್ಲಿ ಕಾರು ಅಪಘಾತವಾಗಿ ಓರ್ವ ಸ್ಥಳದಲ್ಲಿ ಮೃತಪಟ್ಟು, ಮೂವರು ಗಾಯಗೊಂಡ ಘಟನೆ ರವಿವಾರ ಬೆಳಗ್ಗೆ ನಡೆದಿದೆ. 

ರಸ್ತೆ ಪಕ್ಕದಲ್ಲಿದ್ದ ಮೋರಿಗೆ ಕಾರು ಢಿಕ್ಕಿಯಾಗಿ ಈ ಅಪಘಾತ ಸಂಭವಿಸಿದೆ.

ಮೃತರನ್ನು ಮಹಾರಾಷ್ಟ್ರ ಮೂಲದ ಬಾಲ ಸಾಹೇಬ್ ಕೃಷ್ಣ ದೇಸಾಯಿ (48) ಎಂದು ಗುರುತಿಸಲಾಗಿದೆ. ನರಸೀಪುರಕ್ಕೆ ಔಷಧಿಗೆಂದು ಬರುತ್ತಿದ್ದ ವೇಳೆ ಈ ಘಟನೆ ನಡೆದಿದೆ. ಮಂಜು ಕಾರಣದಿಂದ ರಸ್ತೆ ಕಾಣದೇ ಈ ಅಪಘಾತ ಸಂಭವಿಸಿರುವುದಾಗಿ ತಿಳಿದುಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News