ಹೋರಿ ದಾಳಿ: ರೈತನಿಗೆ ಗಂಭೀರ ಗಾಯ

Update: 2019-03-17 15:16 GMT

ಸಕಲೇಶಪುರ: ತೋಟದ ಕೆಲಸಕ್ಕೆ ಹೋಗಿದ್ದ ಸಂಧರ್ಭದಲ್ಲಿ ಹೋರಿಯೊಂದು ಏಕಾಏಕಿ ದಾಳಿ ಮಾಡಿದ ಪರಿಣಾಮ ರೈತರೊಬ್ಬರು ತೀವ್ರವಾಗಿ ಗಾಯಗೊಂಡಿರುವ ಘಟನೆ ತಾಲ್ಲೂಕಿನ ಮೆಣಸಮಕ್ಕಿ ಗ್ರಾಮದಲ್ಲಿ ನಡೆದಿದೆ.

ಶಿವಪ್ಪ(60) ಗಾಯಗೊಂಡಿರುವ ರೈತನಾಗಿದ್ದು, ಎಂದಿನಂತೆ ಮುಂಜಾನೆ 8 ಗಂಟೆ ಸಮಯಕ್ಕೆ ಕಾಫಿ ತೋಟಕ್ಕೆ ತೆರಳಿದ ಅವರು ತೋಟದಲ್ಲಿ ಕೆಲಸ ಮಾಡುತ್ತಿರುವಾಗ ಹೋರಿಯೊಂದು ಏಕಾಏಕಿ ದಾಳಿ ಮಾಡಿದ್ದರಿಂದ ಶಿವಪ್ಪ ಅವರ ಕಾಲಿಗೆ ಗಂಭೀರ ಗಾಯವಾಗಿದೆ. ಕುಟುಂಬದವರು ಸರಿಯಾದ ಸಮಯಕ್ಕೆ ಅಸ್ಪತ್ರೆಗೆ ಸೇರಿಸಿದ್ದರಿಂದ ರೈತ ಶಿವಪ್ಪನವರ ಜೀವ ಉಳಿದಿದೆ ಎಂದು ತಾಲ್ಲೂಕು ಆಸ್ಪತ್ರೆ ಶಸ್ತ್ರ ಚಿಕಿತ್ಸಾ ತಜ್ಞರಾದ ಡಾ. ಮಧುಸೂಧನ್ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News