ಧಾರವಾಡದಲ್ಲಿ ಕಟ್ಟಡ ಕುಸಿತ; ಮೃತರ ಸಂಖ್ಯೆ 9ಕ್ಕೆ ಏರಿಕೆ

Update: 2019-03-21 07:20 GMT

ಧಾರವಾಡ, ಮಾ.21: ಧಾರವಾಡದಲ್ಲಿ ನಿರ್ಮಾಣ ಹಂತದಲ್ಲಿದ್ದ ಕಟ್ಟಡ ಕುಸಿದ ಪರಿಣಾಮವಾಗಿ ಕಟ್ಟಡದ ಅವಶೇಷಗಳಡಿ ಸಿಲುಕಿಕೊಂಡು ಮೃತಪಟ್ಟವರ ಸಂಖ್ಯೆ 9ಕ್ಕೆ

ಏರಿಕೆಯಾಗಿದೆ.

ಭೀಕರ ದುರಂತದಲ್ಲಿ ಮೃತಪಟ್ಟಿರುವ ಓರ್ವ ವೃದ್ಧೆ ಹಾಗೂ  ಮಗುವಿನ  ಮೃತದೇಹವನ್ನು ಗುರುವಾರ ಹೊರಕ್ಕೆ ತೆಗೆಯಲಾಗಿದೆ.

ಇದೇ ವೇಳೆ ಕಾರ್ಯಾಚರಣೆ ನಡೆಸಿ ಇಬ್ಬರ ರಕ್ಷಣೆ ಮಾಡಲಾಗಿದೆ.  ಧಾರವಾಡ ನಿವಾಸಿ  ಪ್ರೇಮಾ ಉಣಕಲ್ (38) ಮತ್ತು ಕಲಘಟಗಿಯ ವಿದ್ಯಾರ್ಥಿ ನಬೀಸಾಬ್ ನದಾಪ್  ಅವರನ್ನು ಎನ್ ಡಿ ಆರ್ ಎಫ್ ಸಿಬ್ಬಂದಿಗಳು ಒಂದೂವರೆ ಘಂಟೆ ಕಾರ್ಯಾಚರಣೆ ನಡೆಸಿ ರಕ್ಷಣೆ ಮಾಡಲಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಇನ್ನೂ 12 ಮಂದಿ ಕಟ್ಟಡದ ಅವಶೇಷಗಳಡಿ ಸಿಲುಕಿರುವ ಶಂಕೆ ವ್ಯಕ್ತವಾಗಿದ್ದು, ಸತತ ಕಾರ್ಯಾಚರಣೆ ನಾಳೆಯೂ  ಮುಂದುವರಿಯಲಿದೆ ಎಂದು ಮೂಲಗಳು  ತಿಳಿಸಿವೆ. ಈ ವರೆಗೆ 60ಕ್ಕೂ  ಅಧಿಕ ಮಂದಿಯನ್ನು ರಕ್ಷಿಸಲಾಗಿದೆ ಎಂದು ತಿಳಿದು ಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News