ಈಡುಗಾಯಿ ಒಡೆಯಲಿಲ್ಲ ಸಚಿವ ರೇವಣ್ಣ ಗರಂ.. !

Update: 2019-03-22 06:37 GMT

ಹಾಸನ, ಮಾ.22: ಪ್ರತಿಷ್ಠಿತ ಹಾಸನ ಲೋಕಸಭಾ ಕ್ಷೇತ್ರದ  ಜೆಡಿಎಸ್ ಅಭ್ಯರ್ಥಿಯಾಗಿರುವ ಪ್ರಜ್ವಲ್ ರೇವಣ್ಣ  ಶುಕ್ರವಾರ ಮಧ್ಯಾಹ್ನ 12:30ಕ್ಕೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಾಮಪತ್ರ ಸಲ್ಲಿಸಲಿದ್ದಾರೆ.

ನಾಮಪತ್ರ ಸಲ್ಲಿಸುವ ಮೊದಲು  ಪ್ರಜ್ವಲ್ ರೇವಣ್ಣ  ಅವರು ತಂದೆ  ಲೋಕೋಪಯೋಗಿ ಸಚಿವ ಎಚ್ ಡಿ ರೇವಣ್ಣ  ಮತ್ತು ತಾಯಿ ಭವಾನಿ ರೇವಣ್ಣ  ಜೊತೆ ಹಾಸನದ ವಿವಿಧ ದೇವಾಲಯಗಳಿಗೆ ಭೇಟಿ ನೀಡಿ ಪೂಜೆ ಸಲ್ಲಿಸುತ್ತಿದ್ದಾರೆ . 5 ದೇವಾಲಯಗಳಲ್ಲಿ ನಾಮಪತ್ರಗಳ ಪ್ರತಿಗಳನ್ನು ಇಟ್ಟು ಪೂಜೆ ಸಲ್ಲಿಸಿದ್ದಾರೆ.

ಹೊಳೆ ನರಸಸೀಪುರದ ಲಕ್ಷ್ಮೀ ನರಸಿಂಹ ದೇವಾಸ್ಥಾನದಲ್ಲಿ ವಿಶೇಷ ಪೂಜೆ ವೇಳೆ ಸಚಿವ ರೇವಣ್ಣ ಈಡುಗಾಯಿ ಒಡೆಯಲು ಯತ್ನಿಸಿದಾಗ , ಮೊದಲ ಯತ್ನದಲ್ಲಿ ಈಡುಗಾಯಿ ಒಡೆಯಲಿಲ್ಲ. ಹೀಗಾಗಿ ಗರಂ ಆದ ಸಚಿವ ರೇವಣ್ಣ ಎರಡನೇ ಯತ್ನದಲ್ಲಿ ಈಡುಗಾಯಿ ಒಡೆದರು ಎಂದು ತಿಳಿದು ಬಂದಿದೆ.

ಪ್ರಜ್ವಲ್ ನಾಮಪತ್ರ ಸಲ್ಲಿಸುವ ಕಾರ್ಯಕ್ರಮದಲ್ಲಿ ಮುಖ್ಯ ಮಂತ್ರಿ ಎಚ್ ಡಿ ಕುಮಾರಸ್ವಾಮಿ, ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ಭಾಗವಹಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News