ಪಾಕಿಸ್ತಾನಕ್ಕೆ ಪ್ರೇಮ ಪತ್ರ ಬರೆಯುವುದನ್ನು ನಿಲ್ಲಿಸಿ

Update: 2019-03-23 17:46 GMT

ಹೊಸದಿಲ್ಲಿ, ಮಾ. 23: ಪಾಕಿಸ್ತಾನ ರಾಷ್ಟ್ರೀಯ ದಿನಾಚರಣೆ ಸಂದರ್ಭ ಭಾರತದ ಪ್ರಾಧಾನಿ ಮೋದಿ ಶುಭ ಹಾರೈಸಿದ್ದಾರೆ ಎಂದು ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಬಹಿರಂಗಗೊಳಿಸಿದ ಒಂದು ದಿನದ ಬಳಿಕ ಶನಿವಾರ ನರೇಂದ್ರ ಮೋದಿ ಅವರನ್ನು ತರಾಟೆಗೆ ತೆಗೆದುಕೊಂಡಿರುವ ಕಾಂಗ್ರೆಸ್, ಮೋದಿ ಅವರು ನೆರೆಯ ರಾಷ್ಟ್ರಕ್ಕೆ ಪ್ರೇಮ ಪತ್ರ ಬರೆಯುವುದನ್ನು ನಿಲ್ಲಿಸಬೇಕು ಎಂದು ಹೇಳಿದೆ.

ಭಯೋತ್ಪಾದನೆ ಬಗ್ಗೆ ಯಾವುದೇ ರೀತಿಯಲ್ಲಿ ಉಲ್ಲೇಖಿಸದೆ, ಪಾಕಿಸ್ತಾನದ ಪ್ರಧಾನಿ ಅವರನ್ನು ಅಭಿನಂದಿಸಿರುವುದನ್ನು ಪ್ರಧಾನಿ ನರೇಂದ್ರ ಮೋದಿ ಮರೆ ಮಾಚಿದ್ದಾರೆ ಎಂದು ಕಾಂಗ್ರೆಸ್‌ನ ವಕ್ತಾರ ರಣದೀಪ್ ಸುರ್ಜೇವಾಲ ಹೇಳಿದ್ದಾರೆ. “ಸಾರಿ-ಶಾಲು ಕೊಡು-ಕೊಳ್ಳುವಿಕೆ, ಜನ್ಮ ದಿನಾಚರಣೆಗೆ ಪಾಕಿಸ್ತಾನಕ್ಕೆ ಭೇಟಿ, ಐಎಸ್‌ಐಗೆ ಆಹ್ವಾನಿಸುವ ರಾಜತಾಂತ್ರಿಕತೆಯ ಮಿಸ್ಟರ್ -56 ನಿನ್ನೆ ತುಂಬಾ ನಾಚಿಕೆ ಅನುಭವಿಸಿದ್ದಾರೆ. ಊಹಿಸಿ?, ಪಾಕಿಸ್ತಾನದ ರಾಷ್ಟ್ರೀಯ ದಿನಾಚರಣೆ ಸಂದರ್ಭ ಪಾಕಿಸ್ತಾನದ ಭಯೋತ್ಪಾದನೆ ಬಗ್ಗೆ ಒಂದೇ ಒಂದು ಮಾತು ಹೇಳದೆ ಪಾಕಿಸ್ತಾನದ ಪ್ರಧಾನಿ ಅವರನ್ನು ಅಭಿನಂದಿಸಿರುವುದನ್ನು ಚೌಕಿದಾರ್ ಮರೆಮಾಚಿದ್ದಾರೆ” ಎಂದು ಅವರು ಹೇಳಿದ್ದಾರೆ.

ಮೋದಿ ಅವರ ‘ಶಕ್ತಿ ರಾಜಕಾರಣ’ ಜನರು ಹಾಗೂ ಮಾಧ್ಯಮಗಳನ್ನು ಮಾತ್ರ ಗುರಿಯಾಗಿರಿಸಿದೆ ಎಂದು ರಣದೀಪ್ ಸುರ್ಜೇವಾಲ ತನ್ನ ಮೈಕ್ರೊ ಬ್ಲಾಗ್ ಸೈಟ್‌ನಲ್ಲಿ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News