ಲೋಕಸಭೆ ಚುನಾವಣೆ: ರಾಜ್ಯ ಕಾಂಗ್ರೆಸ್ ಅಭ್ಯರ್ಥಿಗಳ ಮೊದಲ ಪಟ್ಟಿ ಪ್ರಕಟ

Update: 2019-03-23 19:01 GMT

ಬೆಂಗಳೂರು, ಮಾ.23: ಲೋಕಸಭಾ ಚುನಾವಣೆಗೆ ಕಾಂಗ್ರೆಸ್ ತನ್ನ ಮೊದಲ ಪಟ್ಟಿಯನ್ನು ಪ್ರಕಟಿಸಿದ್ದು, ರಾಜ್ಯದ 18 ಕ್ಷೇತ್ರಗಳಿಗೆ ಅಭ್ಯರ್ಥಿಯನ್ನು ಘೋಷಿಸಿದೆ. ಇನ್ನುಳಿದ 2 ಕ್ಷೇತ್ರಗಳಾದ ಬೆಂಗಳೂರು ದಕ್ಷಿಣ ಹಾಗೂ ಧಾರವಾಡ ಕ್ಷೇತ್ರಗಳಿಗೆ ಅಭ್ಯರ್ಥಿಯನ್ನು ಘೋಷಣೆ ಮಾಡಿಲ್ಲ.

ಚಿಕ್ಕೋಡಿ-ಪ್ರಕಾಶ್ ಹುಕ್ಕೇರಿ, ಬೆಳಗಾವಿ-ವಿರುಪಾಕ್ಷಿ ಎಸ್.ಸಾಧುನವರ್, ಬಾಗಲಕೋಟೆ-ವೀಣಾ ಕಾಶಪ್ಪನವರ್, ಗುಲ್ಬರ್ಗ(ಎಸ್ಸಿ)- ಮಲ್ಲಿಕಾರ್ಜುನ ಖರ್ಗೆ, ರಾಯಚೂರು(ಎಸ್ಸಿ)-ಬಿ.ವಿ.ನಾಯಕ್, ಬೀದರ್-ಈಶ್ವರ್ ಖಂಡ್ರೆ, ಕೊಪ್ಪಳ-ರಾಜಶೇಖರ್ ಹಿಟ್ನಾಳ್, ಬಳ್ಳಾರಿ(ಎಸ್ಟಿ)-ವಿ.ಎಸ್.ಉಗ್ರಪ್ಪ, ಹಾವೇರಿ-ಡಿ.ಆರ್.ಪಾಟೀಲ್, ದಾವಣಗೆರೆ-ಶಾಮನೂರು ಶಿವಶಂಕರಪ್ಪ

ದಕ್ಷಿಣ ಕನ್ನಡ-ಮಿಥುನ್ ರೈ, ಚಿತ್ರದುರ್ಗ (ಎಸ್ಸಿ)-ಬಿ.ಎನ್.ಚಂದ್ರಪ್ಪ, ಮೈಸೂರು-ಕೊಡಗು-ಸಿ.ಎಚ್.ವಿಜಯಶಂಕರ್, ಚಾಮರಾಜನಗರ-ಆರ್.ದ್ರುವನಾರಾಯಣ, ಬೆಂಗಳೂರು ಗ್ರಾಮಾಂತರ-ಡಿ.ಕೆ.ಸುರೇಶ್, ಬೆಂಗಳೂರು ಕೇಂದ್ರ-ರಿಝ್ವಾನ್ ಅರ್ಶದ್, ಚಿಕ್ಕಬಳ್ಳಾಪುರ-ಡಾ.ಎಂ.ವೀರಪ್ಪಮೊಯ್ಲಿ ಹಾಗೂ ಕೋಲಾರ(ಎಸ್ಸಿ)-ಕೆ.ಎಚ್.ಮುನಿಯಪ್ಪರನ್ನು ಕಾಂಗ್ರೆಸ್ ತನ್ನ ಅಭ್ಯರ್ಥಿ ಗಳನ್ನಾಗಿ ಪ್ರಕಟಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News