ವಯನಾಡ್ನಲ್ಲಿ ರಾಹುಲ್ ಗಾಂಧಿ ಸ್ಪರ್ಧಿಸುವುದಾಗಿ ನಾನು ಹೇಳಿಲ್ಲ: ಉಮ್ಮನ್ ಚಾಂಡಿ
Update: 2019-03-28 06:15 GMT
ಕೋಝಿಕ್ಕೋಡ್, ಮಾ. 28: ರಾಹುಲ್ಗಾಂಧಿ ವಯನಾಡ್ನಿಂದ ಸ್ಪರ್ಧಿಸಲಿದ್ದಾರೆ ಎಂದು ತಾನು ನಿಖರವಾಗಿ ಹೇಳಿಲ್ಲ ಎಂದು ಕೇರಳ ಮಾಜಿ ಮುಖ್ಯಮಂತ್ರಿ ಹಾಗೂ ಎಐಸಿಸಿ ಸೆಕ್ರಟರಿ ಉಮ್ಮನ್ ಚಾಂಡಿ ಹೇಳಿದ್ದಾರೆ.
ವಯನಾಡ್ನಲ್ಲಿ ಟಿ.ಸಿದ್ದೀಖ್ ಪ್ರಚಾರ ಆರಂಭಿಸಿದ್ದರು. ಇದರ ಬೆನ್ನಲ್ಲೇ ರಾಹುಲ್ ಗಾಂಧಿ ಇಲ್ಲಿ ಸ್ಪರ್ಧಿಸುವಂತೆ ಉಮ್ಮನ್ಚಾಂಡಿ ಹೇಳಿಕೆ ನೀಡಿದ್ದರು. ಆದರೆ ಅವರು ಇದೀಗ ತನ್ನ ಹೇಳಿಕೆಯಿಂದ ಹಿಂದೆ ಸರಿದಿದ್ದಾರೆ.
ಮಾರ್ಚ್ 23ರಂದು ಪತ್ತನಂತಿಟ್ಟದಲ್ಲಿ ನಡೆದ ಒಂದು ಕಾರ್ಯಕ್ರಮದಲ್ಲಿ ರಾಹುಲ್ಗಾಂಧಿಯ ಸ್ಪರ್ಧೆಯ ಬಗ್ಗೆ ಅವರು ಮಾತನಾಡಿದ್ದರು.