ವಿಜಯಪುರ: ಮಲಗಿದ್ದ ಇಬ್ಬರ ಬರ್ಬರ ಹತ್ಯೆ

Update: 2019-04-01 07:49 GMT

ವಿಜಯಪುರ, ಎ.1: ತೋಟದ ಮನೆಯಲ್ಲಿ ಮಲಗಿದ್ದ ಇಬ್ಬರನ್ನು ಮಾರಕಾಯುಧಗಳಿಂದ ಕೊಲೆಗೈದಿರುವ ಘಟನೆ ವಿಜಯಪುರ ಜಿಲ್ಲೆ ಸಿಂದಗಿ ತಾಲೂಕಿನ ಚಾಂದಕವಟೆ ಗ್ರಾಮದಲ್ಲಿ ರವಿವಾರ ರಾತ್ರಿ ನಡೆದಿದ್ದು, ಇಂದು ಬೆಳಗ್ಗೆ ಬೆಳಕಿಗೆ ಬಂದಿದೆ.

ಪರಮಾನಂದ ದರಿಕಾರ ಹಾಗೂ ಅಶೋಕ ಬಿರಾದರ ಕೊಲೆಯಾದವರು. ಆಸ್ತಿ ಕಲಹಕ್ಕಾಗಿ ಈ ಕೊಲೆ ನಡೆದಿರುವ ಬಗ್ಗೆ ಪೊಲೀಸರ ಶಂಕೆ ವ್ಯಕ್ತಪಡಿಸಿದ್ದಾರೆ. ಹತ್ಯ ಆರೋಪಿಗಳಾಗಿ ಪೊಲೀಸರು ಬಲೆ ಬೀಸಿದ್ದಾರೆ.

ಈ ಕುರಿತು ಸಿಂಧಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News