ಜನಪರ ಕೆಲಸ ನಿರ್ವಹಿಸುವಲ್ಲಿ ದ್ರುವನಾರಾಯಣ್ ಯಶಸ್ವಿ: ಶಾಸಕ ನರೇಂದ್ರ

Update: 2019-04-01 18:57 GMT

ಹನೂರು, ಎ.1: ಸಂಸದ ಧ್ರುವನಾರಾಯಣ್ ಜನರ ಅಪೇಕ್ಷೆಗೆ ತಕ್ಕಂತೆ ಕೆಲಸ ನಿರ್ವಹಿಸುವಲ್ಲಿ ಯಶಸ್ವಿಯಾಗಿದ್ದು, ಹನೂರು ಕ್ಷೇತ್ರದ ಜನರು ಒಮ್ಮತದಿಂದ ಬೆಂಬಲಿಸುವಂತೆ ಶಾಸಕ ನರೇಂದ್ರ ರಾಜೂಗೌಡ ಹೇಳಿದ್ದಾರೆ.  

ಹನೂರು ತಾಲೂಕಿನ ಮಹದೇಶ್ವರಬೆಟ್ಟ, ಗೋಪಿನಾಥಮ್ ಸೇರಿದಂತೆ ಪೊನ್ನಾಚ್ಚಿ ಗ್ರಾಮಗಳಲ್ಲಿ ಚುನಾವಣಾ ಪ್ರಚಾರದ ವೇಳೆ ಮಾತನಾಡಿದ ಅವರು, ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳ ಮೈತ್ರಿ ಅಭ್ಯರ್ಥಿ ಆರ್.ಧ್ರುವನಾರಾಯಣ್, ಕಳೆದ ಹತ್ತು ವರ್ಷಗಳ ಕಾಲ ಸಂಸದರಾಗಿ ಚಾಮರಾಜನಗರ ಜಿಲ್ಲೆಗೆ ಉತ್ತಮ ಕೆಲಸ ಕಾರ್ಯ ಮಾಡಿದ್ದಾರೆ ಎಂದರು.

ದೇಶದ 523 ಲೋಕಸಭಾ ಸದಸ್ಯರ ಪೈಕಿ 5 ಉತ್ತಮ ಸಂಸದರಲ್ಲಿ ಇವರೂ ಒಬ್ಬರು. ಕೆಲ ಪಕ್ಷದವರು ಚುನಾವಣೆ ಬಂದಾಗ ಮಾತ್ರ ಜನರ ಬಳಿ ಬಂದು ಬಣ್ಣದಾಟವಾಡಿ ಕಳ್ಳ ಎತ್ತಿನ ರೀತಿ ಹೋಗುತ್ತಾರೆ. ಆದರೆ ಧ್ರುವನಾರಾಯಣ್ ಸದಾ ಜನರ ಬಳಿ ಇದ್ದು ಜನರ ಸೇವೆಗೆ ಸಮಯ ಮೀಸಲಿಟ್ಟಿದ್ದಾರೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ರಾಮಾಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಈಶ್ವರ್, ಕೊಳ್ಳೇಗಾಲ ತಾಪಂ ಅಧ್ಯಕ್ಷ ರಾಜೇಂದ್ರ, ಜಿಪಂ ಮಾಜಿ ಸದಸ್ಯ ರಾಮ್ ಶೆಟ್ಟಿ, ಗ್ರಾಪಂ ಅಧ್ಯಕ್ಷೆ ರುಕ್ಮಿಣಿ, ಉಪಾಧ್ಯಕ್ಷ ಮಾದೇಶ್, ನಟೇಶ್, ಕಾಂಗ್ರೆಸ್ ಮುಖಂಡರಾದ ಚೆಲುವರಾಜು, ಪುಟ್ಟರಾಜು, ಮಲ್ಲುಸ್ವಾಮಿ, ಶಿವಣ್ಣ, ಹನುಮಂತ್, ಮಹೇಶ್, ದಾಸಪ್ಪ, ಶಿವರಾಮು, ರಂಗಸ್ವಾಮಿ, ಪೊನ್ನಾಚಿ ಗ್ರಾಪಂ ಉಪಾಧ್ಯಕ್ಷೆ ಮಹದೇವಮ್ಮ ಮೊದಲಾದವರು ಉಪಸ್ಥಿತರಿದ್ದರು.

ಕಾಂಗ್ರೆಸ್ ಸೇರ್ಪಡೆ

ಮಹದೇಶ್ವರನಬೆಟ್ಟದ ಚುನಾವಣಾ ಪ್ರಚಾರ ಸಭೆಯಲ್ಲಿ ಬಿಜೆಪಿಯ ಕೀರನಹೊಲ ಗ್ರಾಮದ ಅಲಗತಂಬಡಿ ಹಾಗೂ ಮಹದೇವಸ್ವಾಮಿ, ಗೋಪಿನಾಥಂ ಗ್ರಾಮದ ಚುನಾವಣಾ ಪ್ರಚಾರ ಸಭೆಯಲ್ಲಿ ಬಿಜೆಪಿಯ ರೆಡ್ಡಿ, ನಾಗರಾಜು, ಕೃಷ್ಣ, ಮರೂರು ಗ್ರಾಮದ ಚುನಾವಣಾ ಪ್ರಚಾರದಲ್ಲಿ ಬಿಜೆಪಿಯ ಶಿವಣ್ಣ, ಹಳೆಹೊಲ ವಾರಪ್ಪ ಕಾಂಗ್ರೆಸ್‌ ಸೇರ್ಪಡೆಯಾದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News