ಕೇಕಡ ಬೋಜಮ್ಮಗೆ ಪಿಎಚ್‍ಡಿ ಪದವಿ

Update: 2019-04-03 11:52 GMT

ಮಡಿಕೇರಿ,ಎ.3 : ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪದವಿ ಕಾಲೇಜಿನ ಕನ್ನಡ ಪ್ರಾಧ್ಯಾಪಕಿ ಬೋಜಮ್ಮ ಕೆ.ಎನ್, ಇವರು ವಿಜಯಪುರ ಅಕ್ಕಮಹಾದೇವಿ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಸಬಿಹಾ ಅವರ ಮಾರ್ಗದರ್ಶನದಲ್ಲಿ ಮಂಗಳೂರು ವಿಶ್ವವಿದ್ಯಾನಿಲಯಕ್ಕೆ ಸಲ್ಲಿಸಿದ "ಅಧುನಿಕ ಕನ್ನಡ ಸಾಹಿತ್ಯದಲ್ಲಿ ಬುದ್ಧ" ಎಂಬ ಸಂಶೋಧನ ಮಹಾಪ್ರಬಂಧಕ್ಕೆ ಮಂಗಳೂರು ವಿಶ್ವವಿದ್ಯಾಲಯ ಪಿಎಚ್.ಡಿ ಪದವಿ ನೀಡಿದೆ. 

ಇವರು ಮೂಲತಃ ಚೇರಂಬಾಣೆ ಬಿ. ಬಾಡಗ ಗ್ರಾಮದವರಾಗಿದ್ದು, ಪ್ರಸ್ತುತ ಮಂಗಳೂರಿನಲ್ಲಿ ನೆಲೆಸಿರುವ ಉದ್ಯಮಿ ಹಾಗೂ ಸಾಮಾಜಿಕ ಕಾರ್ಯಕರ್ತರಾಗಿರುವ ಕೇಕಡ ಎಂ.ಚಿಣ್ಣಪ್ಪ(ಜಿಮ್ಮಿ) ಅವರ ಪತ್ನಿ ಹಾಗೂ ನಡಿಕೇರಿ ಗ್ರಾಮದ ಕೋಳೇರ ಎಂ.ನಂಜಪ್ಪ(ನಿವೃತ್ತ ಶಿಕ್ಷಕ) ಮತ್ತು ಪೂವಮ್ಮ ದಂಪತಿಗಳ ಪುತ್ರಿ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News