ಕೆಪಿಸಿಸಿ ಅಲ್ಪಸಂಖ್ಯಾತರ ಘಟಕದ ನೂತನ ಸಂಯೋಜಕರಾಗಿ ಎಂ.ಎ.ಉಸ್ಮಾನ್ ನೇಮಕ
Update: 2019-04-03 11:54 GMT
ಮಡಿಕೇರಿ,ಎ.3 : ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ರಾಜ್ಯ ಅಲ್ಪಸಂಖ್ಯಾತರ ಘಟಕದ ನೂತನ ಸಂಯೋಜಕರನ್ನಾಗಿ ಎಂ.ಎ.ಉಸ್ಮಾನ್ ಅವರನ್ನು ನೇಮಕ ಮಾಡಲಾಗಿದೆ.
ಕೆಪಿಸಿಸಿ ಉಪಾಧ್ಯಕ್ಷ ಡಾ.ಜಾಫರ್ ಅಹಮ್ಮದ್ ಖಾನ್ ಹಾಗೂ ರಾಜ್ಯ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ವೈ.ಸೈಯದ್ ಅಹಮ್ಮದ್ ಅವರು ನೇಮಕದ ಆದೇಶ ಪತ್ರವನ್ನು ಉಸ್ಮಾನ್ ಅವರಿಗೆ ಹಸ್ತಾಂತರಿಸಿದರು.