ತ್ರಿಶ್ಶೂರು: ಇಂಜಿನಿಯರಿಂಗ್ ವಿದ್ಯಾರ್ಥಿನಿಯನ್ನು ಬೆಂಕಿ ಹಚ್ಚಿ ಕೊಂದ ಸ್ನೇಹಿತ

Update: 2019-04-04 11:30 GMT

ತ್ರಿಶ್ಶೂರು, ಎ.4: ಕೇರಳದ ತ್ರಿಶ್ಶೂರಿನಲ್ಲಿ 22 ವರ್ಷದ ಇಂಜಿನಿಯರಿಂಗ್ ವಿದ್ಯಾರ್ಥಿನಿಯೊಬ್ಬಳನ್ನು ಆಕೆಯ ಸ್ನೇಹಿತನೆಂದು ತಿಳಿಯಲಾಗಿರುವ ವ್ಯಕ್ತಿಯೊಬ್ಬ ಬೆಂಕಿ ಹಚ್ಚಿ ಸಾಯಿಸಿದ ಆಘಾತಕಾರಿ ಘಟನೆ ಗುರುವಾರ ನಡೆದಿದೆ. ಇದೊಂದು ಪೂರ್ವಯೋಜಿತ ಕೃತ್ಯವಾಗಿರಬೇಕೆಂದು ಪೊಲೀಸರು ಶಂಕಿಸಿದ್ದಾರೆ.

 ಆರೋಪಿ ನಿತೀಶ್ (32) ಯುವತಿಗೆ ಬೆಂಕಿ ಹಚ್ಚಿದ್ದನ್ನು ಗಮನಿಸಿದ ಸ್ಥಳೀಯರು ಕೂಡಲೇ ಧಾವಿಸಿ ಆತನನ್ನು ಸೆರೆ ಹಿಡಿದರೂ ಯುವತಿಯ ಪ್ರಾಣ ರಕ್ಷಿಸುವುದು ಅವರಿಗೆ ಸಾಧ್ಯವಾಗಿಲ್ಲ.  ಯುವತಿ ತನ್ನ ಅಜ್ಜ, ಅಜ್ಜಿಯ ಜತೆ ವಾಸವಾಗಿದ್ದಳೆನ್ನಲಾಗಿದೆ.

ಆಕೆಯ ಮನೆಗೆ ಬೆಳಿಗ್ಗೆ ಸುಮಾರು 7 ಗಂಟೆಗೆ ಆಗಮಿಸಿದ ನಿತೀಶ್ ಯಾವುದೋ ವಿಚಾರಕ್ಕೆ ಜಗಳವಾಡಿ ನಂತರ ಆಕೆಯ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದ. ಆಕೆಯ ಬೊಬ್ಬೆ ಕೇಳಿ ನೆರೆಹೊರೆಯವರು ಧಾವಿಸಿ ಬರುವಷ್ಟರ ಹೊತ್ತಿಗೆ ಯುವತಿಯ ಪ್ರಾಣ ಪಕ್ಷಿ ಹಾರಿ ಹೋಗಿತ್ತು. ಆರೋಪಿಯನ್ನು ಕೂಡಲೇ ಸೆರೆ ಹಿಡಿದು ಅವರು ಪೊಲೀಸರಿಗೆ ಒಪ್ಪಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News