ಧಾರವಾಡ : ಒಟ್ಟು 26 ಅಭ್ಯರ್ಥಿಗಳಿಂದ 35 ನಾಮಪತ್ರಗಳ ಸಲ್ಲಿಕೆ

Update: 2019-04-04 15:15 GMT

ಧಾರವಾಡ,ಎ.04; 2019 ರ ಸಾರ್ವತ್ರಿಕ ಚುನಾವಣೆಯ ಧಾರವಾಡ ಲೋಕಸಭಾ ಕ್ಷೇತ್ರಕ್ಕೆ ನಾಮಪತ್ರ ಸಲ್ಲಿಸಲು ಕೊನೆಯ ದಿನವಾದ ಇಂದು 15 ಜನ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ. ನಾಮಪತ್ರ ಸಲ್ಲಿಕೆಗೆ ಅವಧಿ ಮುಕ್ತಾಯವಾಗಿದ್ದು, ಒಟ್ಟು 26 ಅಭ್ಯರ್ಥಿಗಳಿಂದ 35 ನಾಮಪತ್ರಗಳು ಸಲ್ಲಿಸಲ್ಪಟ್ಟಿವೆ. ನಾಮಪತ್ರ ಪರಿಶೀಲನೆ ಕಾರ್ಯ ನಾಳೆ ನಡೆಯಲಿದೆ. ಎಪ್ರಿಲ್ 8 ನಾಮಪತ್ರ ಹಿಂತೆಗೆದುಕೊಳ್ಳಲು ಕೊನೆಯ ದಿನವಾಗಿದೆ. 

ಇಂದು ನಾಮಪತ್ರ ಸಲ್ಲಿಸಿದವರ ವಿವರ: ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ವಿನಯ ಕುಲಕರ್ಣಿ ಅವರು 3 ಪ್ರತಿಗಳಲ್ಲಿ  ನಾಮಪತ್ರಗಳನ್ನು ಸಲ್ಲಿಸಿದರು. ಪ್ರೌಟಿಸ್ಟ್ ಬ್ಲಾಕ್ ಇಂಡಿಯಾ ಪಕ್ಷದ ಅಭ್ಯರ್ಥಿಯಾಗಿ ವಿನೋದ ಘೋಡಕೆ, ಈ ಹಿಂದೆ ನಾಮಪತ್ರ ಸಲ್ಲಿಸಿದ್ದ ಉತ್ತಮ ಪ್ರಜಾಕೀಯ ಪಕ್ಷದ ಅಭ್ಯರ್ಥಿ ಸಂತೋಷ ನಂದೂರ ಇಂದು 2ನೇ ಪ್ರತಿಯನ್ನು ಸಲ್ಲಿಸಿದರು. 

ಭಾರತ ಭ್ರಷ್ಟಾಚಾರ ಮಿಟಾವೋ ಪಕ್ಷದ ಅಭ್ಯರ್ಥಿಯಾಗಿ ಪ್ರಕಾಶ ಸುಭಾಸ ದೊಡವಾಡ ಹಾಗೂ ಭಾರಿಪ ಬಹುಜನ ಮಹಾಸಂಘದ ಅಭ್ಯರ್ಥಿಯಾಗಿ ಸೋಮಶೇಖರ ಪೀರಾಜಿ ಯಾದವ್, ನ್ಯಾಷನಲ್ ಮಹಿಳಾ ಪಕ್ಷದ (ಎನ್‌ಡಬ್ಲೂಪಿ) ಅಭ್ಯರ್ಥಿಯಾಗಿ ಇರ್ಷಾದ್ ಬೇಗಂ ಅದೋನಿ, ಬಹುಜನ ಸಮಾಜ ಪಕ್ಷದ ಅಭ್ಯರ್ಥಿಯಾಗಿ ಈರಪ್ಪ ಬಿ. ಹರಿಜನ ಉರ್ಫ್ ಮಾದರ, ಶಿವಸೇನಾ ಅಭ್ಯರ್ಥಿಯಾಗಿ ವಿಠ್ಠಲ ನಾರಾಯಣಸಾ ಪವಾರ ಅವರು ತಮ್ಮ ನಾಮಪತ್ರಗಳನ್ನು ಸಲ್ಲಿಸಿದರು.

ಪಕ್ಷೇತರ ಅಭ್ಯರ್ಥಿಗಳಾಗಿ ಶಕೀಲ್ ಅಬ್ದುಲ್ ಸತ್ತಾರ ದೊಡ್ಡವಾಡ, ರಾಯನಗೌಡ ದ್ಯಾಮನಗೌಡ ಕುಮಾರದೇಸಾಯಿ, ವಾದಿರಾಜ ಮಧುಸೂದನ್ ಮನ್ನಾರಿ, ವೀರಪ್ಪ ಸಿ. ಮಾರಡಗಿ, ಅಬ್ದುಲ್ ರಹೆಮಾನ್ ದುಂಡಸಿ, ಬಸವರಾಜ ಸಂಗಣ್ಣವರ, ಹಸೀನಾಬಾನು ಟಪಾಲವಾಲೆ ಅವರು ತಮ್ಮ ನಾಮಪತ್ರಗಳನ್ನು ಚುನಾವಣಾಧಿಕಾರಿ, ಜಿಲ್ಲಾಧಿಕಾರಿ ದೀಪಾ ಚೋಳನ್ ಅವರಿಗೆ ಸಲ್ಲಿಸಿದರು. ಸಹಾಯಕ ಚುನಾವಣಾಧಿಕಾರಿ ಡಾ.ಸುರೇಶ್ ಇಟ್ನಾಳ ಉಪಸ್ಥಿತರಿದ್ದರು.    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News