ಕಾಂಗ್ರೆಸ್ ನೀಡಿದ ಯೋಜನೆಗಳಿಂದ ದೇಶ ಬಲಿಷ್ಠವಾಗಿದೆ: ಶಾಸಕ ನರೇಂದ್ರ ರಾಜೂಗೌಡ

Update: 2019-04-05 18:50 GMT

ಹನೂರು, ಎ.5: ಪ್ರಸಕ್ತ ದಿನಗಳಲ್ಲಿ ಭಾರತ ದೇಶ ಬಲಿಷ್ಟವಾಗಿದೆ ಎಂದರೆ ಅದಕ್ಕೆ ಕಾಂಗ್ರೆಸ್ ಸರಕಾರ ನೀಡಿದ ಮಹತ್ತರ ಯೋಜನೆ ಮತ್ತು ಕಾರ್ಯಕ್ರಮಗಳೇ ಮೂಲ ಕಾರಣ ಎಂದು ಹನೂರು ಶಾಸಕ ಅಧ್ಯಕ್ಷ ನರೇಂದ್ರ ರಾಜೂಗೌಡ ಹೇಳಿದ್ದಾರೆ. 

ಹನೂರು ತಾಲೂಕಿನ ಒಡೆಯರಪಾಳ್ಯ ಗ್ರಾಮದಲ್ಲಿ ಪಿಜಿಪಾಳ್ಯ ಮತ್ತು ಹುತ್ತೂರು ಗ್ರಾಪಂ ಮಟ್ಟದ ಕಾಂಗ್ರೆಸ್ ಕಾರ್ಯಕರ್ತರ ಚುನಾವಣಾ ಪ್ರಚಾರ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ರಫೇಲ್ ಯುದ್ದ ವಿಮಾನ ಖರೀದಿ ಸಂಬಂಧಿಸಿದ ದಾಖಲಾತಿಗಳು ಕಳವಾಗಿದೆ ಎಂದು ಸುಪ್ರಿಂ ಕೋರ್ಟ್ ಗೆ ಅಫಿಡವಿಟ್ ಸಲ್ಲಿಸಿದ್ದು ಬಿಜೆಪಿ ನಗೆಪಾಟಲಾಗಿದೆ. ಕಾಂಗ್ರೆಸ್ ಸರಕಾರದ ಅವಧಿಯಲ್ಲಿ ಭಾರತ ದೇಶವು ಯುದ್ದಗಳನ್ನು ಗೆದ್ದಿದೆ. ಸರ್ಜಿಕಲ್ ಸ್ಟ್ರೈಕ್ ನಡೆಸಿದೆ. ದೇಶದ ಸೈನಿಕರ ಕಲ್ಯಾಣ ಮತ್ತು ದೇಶದ ರಕ್ಷಣೆಗೆ ಹಲವಾರು ಮಹತ್ವದ ಯೋಜನೆಗಳನ್ನು ಹಮ್ಮಿಕೊಂಡಿದೆ. ಕಾಂಗ್ರೆಸ್ ಪಕ್ಷ ಇಂತಹ ಸನ್ನಿವೇಶಗಳನ್ನು ರಾಜಕೀಯವಾಗಿ ಬಳಸಿಕೂಳ್ಳಲಿಲ್ಲ. ಆದರೆ ದೇಶದ ಸೈನಿಕರ ಕಲ್ಯಾಣ ಮತ್ತು ದೇಶದ ರಕ್ಷಣೆಯ ಸಂಬಂಧದ ಸನ್ನಿವೇಶಗಳನ್ನು ಬಿಜೆಪಿ ಮಾತ್ರ ಮಾಡಿದೆ ಎಂದು ರಾಜಕೀಯ ಚಟುವಟಿಕೆಗಳಲ್ಲಿ ಬಳಿಸಿಕೂಂಡು ಬಿಟ್ಟಿ ಪ್ರಚಾರಗಿಟ್ಟಿಸಿಕೊಳ್ಳುತ್ತಿದೆ ಎಂದರು.

ಈ ಸಂದರ್ಭದಲ್ಲಿ ಜಿಪಂ ಸದಸ್ಯೆ ಮರುಗದಮಣಿ, ಮಾಜಿ ಸದಸ್ಯ ಕೊಪ್ಪಾಳಿ ಮಹದೇವ, ರಾಜ್ಯ ಹಿಂದುಳಿದ ವರ್ಗಗಳ ಉಪಾಧ್ಯಕ್ಷ ನಾಗರಾಜು, ಚಾಮುಲ್ ಅಧ್ಯಕ್ಷ ಗುರುಮಲ್ಲಪ್ಪ, ನಿರ್ದೇಶಕ ನಂಜುಂಡಸ್ವಾಮಿ, ತಾಪಂ ಅಧ್ಯಕ್ಷ ರಾಜೇಂದ್ರ, ಮಾಜಿ ಅಧ್ಯಕ್ಷ ರಾಜು, ಹನೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆಂಪಯ್ಯ, ರಾಮಾಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಈಶ್ವರ್, ಮುಖಂಡ ರವಿ, ಲೋಕ್ಕನಹಳ್ಳಿ ಗ್ರಾಪಂ ಅಧ್ಯಕ್ಷ ರಂಗಶೆಟ್ಟಿ, ವಿಎಸ್ ದೊಡ್ಡಿ ಮಲ್ಲಿಕಾರ್ಜುನ ಶೆಟ್ಟಿ, ಮಹದೇವ ಶೆಟ್ಟಿ, ಮಂಗಲ ಪುಟ್ಟರಾಜು, ಚೆಲುವರಾಜು, ಸತೀಶ್, ಪುಟ್ಟವಿರನಾಯಕ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News