ಲಂಚ ಪಡೆಯುವ ವೇಳೆ ಎಸಿಬಿ ಬಲೆಗೆ ಬಿದ್ದ ಎಫ್ಡಿಎ
Update: 2019-04-14 11:20 GMT
ಮೈಸೂರು,ಎ.13: ಪೊಲೀಸ್ ಕಾನ್ಸಟೇಬಲ್ ಓರ್ವರಿಗೆ ನಿವೇಶನದ ಕ್ರಯಪತ್ರ ಮಾಡಿಕೊಡಲು ಮೂರು ಸಾವಿರ ರೂ.ಲಂಚ ಕೇಳಿದ ಕರ್ನಾಟಕ ಗೃಹಮಂಡಳಿಯ ಎಫ್ ಡಿಎ ಗುಮಾಸ್ತನೋರ್ವ ಭ್ರಷ್ಟಾಚಾರ ನಿಗ್ರಹದಳದ ಬಲೆಗೆ ಬಿದ್ದ ಘಟನೆ ಮೈಸೂರಿನಲ್ಲಿ ನಡೆದಿದೆ.
ಅಶೋಕಪುರಂ ಠಾಣೆಯ ಕಾನ್ಸಟೇಬಲ್ ಲೋಕೇಶ್ ದಂಪತಿಗೆ ನಿವೇಶನ ಹಂಚಿಕೆಯಾಗಿತ್ತು. ಇದರ ಕ್ರಯಪತ್ರ ನೀಡಲು ಎಫ್ ಡಿಎ ಗುಮಾಸ್ತ ವಿಜಯ್ ಮೂರು ಸಾವಿರ ರೂ.ಲಂಚ ಕೇಳಿದ್ದ. ಈ ವಿಷಯವನ್ನು ಕಾನ್ಸಟೇಬಲ್ ಎಸಿಬಿಯ ಗಮನಕ್ಕೆ ತಂದಿದ್ದರು. ನಿನ್ನೆ ಲಂಚ ಪಡೆಯುತ್ತಿದ್ದ ವೇಳೆ ಎಸಿಬಿಯ ಡಿವೈಎಸ್ಪಿ ಉಮೇಶ್ ಕುಮಾರ್ ಸೇಠ್ ಹಾಗೂ ಇನ್ಸಪೆಕ್ಟರ್ ಶೇಖರ್ ನೇತೃತ್ವದ ತಂಡ ದಾಳಿ ನಡೆಸಿ ವಿಜಯ್ ನನ್ನು ವಶಕ್ಕೆ ಪಡೆದಿದ್ದು, ಮುಂದಿನ ಕ್ರಮ ಕೈಗೊಂಡಿದ್ದಾರೆ.