ವಿವೇಚನೆಯಿಂದ ಮತ ಚಲಾಯಿಸದಿದ್ದಾಗ ಸಿ.ಟಿ.ರವಿ ಅಂಥವರು ಆಯ್ಕೆಯಾಗುತ್ತಾರೆ: ಸಿದ್ದರಾಮಯ್ಯ
Update: 2019-04-14 12:24 GMT
ಬೆಂಗಳೂರು, ಎ. 14: ‘ಹಣದ ಆಮಿಷ, ಜಾತಿ ಪ್ರೇಮ, ಕೋಮು ಪ್ರಚೋದನೆ ಇಂತಹವುಗಳಿಗೆ ಒಳಗಾಗಿ ವಿವೇಚನೆಯಿಂದ ಮತ ಚಲಾಯಿಸದೆ ಇದ್ದಾಗ ಬಿಜೆಪಿ ಮುಖಂಡ ಸಿ.ಟಿ.ರವಿ ಅಂಥವರು ಪ್ರತಿನಿಧಿಗಳಾಗಿ ಆಯ್ಕೆಯಾಗುತ್ತಾರೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಮಾಜಿ ಸಚಿವ ಸಿ.ಟಿ.ರವಿ ‘ಬಿಜೆಪಿಗೆ ಮತಹಾಕದವರು ತಾಯಿ ಗಂಡ್ರು’ ಎಂಬ ಅವಹೇಳನಕಾರಿ ಹೇಳಿಕೆಗೆ ಟ್ವಿಟರ್ ಮೂಲಕ ಖಾರವಾಗಿ ಪ್ರತಿಕ್ರಿಯೆ ನೀಡಿರುವ ಮಾಜಿ ಸಿಎಂ ಸಿದ್ದರಾಮಯ್ಯ ‘ಇಂತಹವರ ಬಗ್ಗೆ ಎಚ್ಚರ!! ಎಚ್ಚರ!!’ ಎಂದು ಎಚ್ಚರಿಸಿದ್ದಾರೆ.