ಇಬ್ಬರು ಜಿಂಕೆ ಬೇಟೆಗಾರರ ಬಂಧನ

Update: 2019-04-14 18:31 GMT

ಮಂಡ್ಯ, ಎ.14: ಮಳವಳ್ಳಿ ತಾಲೂಕಿನ ಮುತ್ತತ್ತಿ ಅರಣ್ಯ ಪ್ರದೇಶದ ತಿರುಮಡು ಬಳಿ ಜಿಂಕೆ ಬೇಟೆಯಾಡುತ್ತಿದ್ದ ಇಬ್ಬರನ್ನು ಅರಣ್ಯ ಅಧಿಕಾರಿಗಳು ಬಂಧಿಸಿದ್ದಾರೆ.

ಖಚಿತ ಮಾಹಿತಿ ಮೇರೆಗೆ ಹಲಗೂರು ವಲಯ ಅರಣ್ಯಾಧಿಕಾರಿ ಕಿರಣ್‍ಕುಮಾರ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿ ಮುತ್ತತ್ತಿ ಗ್ರಾಮದ ಬಸವರಾಜು ಮತ್ತು ಕನಕಪುರ ತಾಲೂಕಿನ ಮಡಿವಾಳ ಗ್ರಾಮದ ಮುನಿಶಿವ ಎಂಬುವರನ್ನು ಬಂಧಿಸಿದರು.

ಬೇಟೆ ನಾಯಿಗಳ ಸಹಾಯದಿಂದ ಇಬ್ಬರು ಒಂದು ಗಂಡು ಜಿಂಕೆ ಬೇಟೆಯಾಡಿದ್ದು, ಜಿಂಕೆಯ ಕಳೇಬರವನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಬಂಧಿತ ಆರೋಪಿಗಳನ್ನು ನ್ಯಾಯಾಲಯ ನ್ಯಾಯಾಂಗ ವಶಕ್ಕೆ ಒಪ್ಪಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News