‘ನೂರು ಬಾರಿ ಮೈ ತೊಳೆದರೂ ಎಮ್ಮೆ ತರಾನೆ ಕಾಣುತ್ತಾರೆ’

Update: 2019-04-16 13:58 GMT

ಚಿಕ್ಕೋಡಿ, ಎ. 16: ಮೈತ್ರಿ ಮುಖಂಡರು ಮೋದಿ ಮೇಕಪ್ ಮಾಡಿಕೊಳ್ಳುತ್ತಾರೆ ಎಂದು ಟೀಕಿಸುತ್ತಾರೆ. ಮೋದಿ ಬೆಳ್ಳಗೆ, ಸುಂದರವಾಗಿದ್ದಾರೆ. ಹೀಗಾಗಿ, ಅವರೇನೇ ಮಾಡಿದರೂ ಚೆನ್ನಾಗಿ ಕಾಣುತ್ತದೆ. ಆದರೆ, ಸಿಎಂ ಕುಮಾರಸ್ವಾಮಿ ನೂರು ಬಾರಿ ಮೈ ತೊಳೆದರೂ ಎಮ್ಮೆ ತರಾನೆ ಕಾಣುತ್ತಾರೆ ಎಂದು ಬಿಜೆಪಿ ಮಾಜಿ ಶಾಸಕ ರಾಜು ಕಾಗೆ ಅವಹೇಳನಕಾರಿ ಹೇಳಿಕೆ ನೀಡಿದ್ದಾರೆ.

ಮಂಗಳವಾರ ತಾಲೂಕಿನ ಕಾಗವಾಡದಲ್ಲಿ ಏರ್ಪಡಿಸಿದ್ದ ಸಾರ್ವಜನಿಕ ಸಮಾರಂಭದಲ್ಲಿ ಮಾತನಾಡಿದ ಅವರು, ಏಕವಚನದಲ್ಲಿ ಸಿಎಂ ಕುಮಾರಸ್ವಾಮಿ ವಿರುದ್ಧ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಮಂಡ್ಯ ಕ್ಷೇತ್ರದಲ್ಲಿ ಸಿಎಂ ಕುಮಾರಸ್ವಾಮಿ ಬಿಜೆಪಿ ಬೆಂಬಲಿತ ಅಭ್ಯರ್ಥಿ ಸುಮಲತಾ ಅವರ ಮನೆ ವಿಚಾರ ಪ್ರಸ್ತಾಪಿಸುತ್ತಾರೆ ಎಂದು ಟೀಕಿಸಿದರು.

ನಾವು ಹೆಣ್ಣುಮಕ್ಕಳಿಗೆ ಬಹಳ ಗೌರವ ನೀಡುತ್ತೇವೆ. ಪರಸ್ತ್ರೀಯರನ್ನು ತಾಯಿಯ ಸ್ಥಾನದಲ್ಲಿಡುತ್ತೇವೆ. ಆದರೆ, ಕುಮಾರಸ್ವಾಮಿ ಸುಮಲತಾ ಅವರಿಗೆ ಗಂಡ ಸತ್ತವಳು ಎಂದೆಲ್ಲ ಹೀಯಾಳಿಸಿದ್ದಾರೆ. ಅದು ಅವರ ಸಂಸ್ಕೃತಿಯನ್ನು ತೋರಿಸುತ್ತದೆ. ಚುನಾವಣಾ ಪ್ರಚಾರದ ವೇಳೆ ತಾವು ಗೆದ್ದರೆ ರಾಜ್ಯಕ್ಕೆ ಏನು ಮಾಡುತ್ತಾರೆಂದು ಹೇಳಿಕೊಳ್ಳಲಿ. ಅದು ಬಿಟ್ಟು ಅಂಬರೀಶ್ ಮನೆ ವಿಚಾರದಿಂದ ಜನರಿಗೇನು ಪ್ರಯೋಜನ ಎಂದು ವಾಗ್ದಾಳಿ ನಡೆಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News