ಚುನಾವಣಾ ಕರ್ತವ್ಯದಲ್ಲಿದ್ದ ಮೂವರು ಸರಕಾರಿ ಅಧಿಕಾರಿಗಳು ಅಪಘಾತದಲ್ಲಿ ಮೃತ್ಯು

Update: 2019-04-16 15:39 GMT

ಬಾರ್ಮೇರ್,ಎ.16: ರಾಜಸ್ಥಾನದ ಬಾರ್ಮೇರ್ ಜಿಲ್ಲೆಯಲ್ಲಿ ಸೋಮವಾರ ರಾತ್ರಿ ಲಾರಿಯೊಂದು ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಪರಿಣಾಮ ಅದರಲ್ಲಿ ಪ್ರಯಾಣಿಸುತ್ತಿದ್ದ ಮೂವರು ಸರಕಾರಿ ಅಧಿಕಾರಿಗಳು ಮೃತಪಟ್ಟಿದ್ದಾರೆ.

ಚುನಾವಣಾ ಕರ್ತವ್ಯದಲ್ಲಿದ್ದ ಈ ಅಧಿಕಾರಿಗಳು ಜೋಧಪುರದಿಂದ ಮರಳುತ್ತಿದ್ದಾಗ ಯಲವಾಸ್ ಗ್ರಾಮದ ಬಳಿ ಈ ದುರಂತ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದರು.

ಮೃತರನ್ನು ಕಿಶನಲಾಲ್ ದಾಭಿ(55),ಚಂದ್ರಪ್ರಕಾಶ ಸೋನಿ (43)ಮತ್ತು ಓಂ ಪ್ರಕಾಶ(48) ಎಂದು ಗುರುತಿಸಲಾಗಿದ್ದು,ಮೂವರೂ ಬಾರ್ಮೇರ್ ಜಿಲ್ಲೆಯ ನಿವಾಸಿಗಳಾಗಿದ್ದರು. ದಾಭಿ ಮತ್ತು ಓಂ ಪ್ರಕಾಶ ಸ್ಥಳದಲ್ಲಿಯೇ ಸಾವನ್ನಪ್ಪಿದ್ದರೆ,ಸೋನಿ ಜೋಧಪುರದ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಕೊನೆಯುಸಿರೆಳೆದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News