ಮಹಿಳೆಯ ಕತ್ತಿನಲ್ಲಿದ್ದ ಮಾಂಗಲ್ಯ ಸರ ಕಸಿದು ಪರಾರಿ

Update: 2019-04-20 18:11 GMT

ಮೈಸೂರು,ಎ.20: ಬೈಕ್ ನಲ್ಲಿ ಬಂದ ಯುವಕರಿಬ್ಬರು ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಮಹಿಳೆಯ ಕತ್ತಿನಲ್ಲಿದ್ದ ಮಾಂಗಲ್ಯ ಸರವನ್ನು ಹಾಡಹಗಲೇ ಎಗರಿಸಿದ ಘಟನೆ ಆಕಾಶವಾಣಿ ಸರ್ಕಲ್ ಬಳಿಯ ಸುನಂದ ಶಾಲೆ ಬಳಿ ನಡೆದಿದೆ.

ವಿವಿ ಮೊಹಲ್ಲಾ ನಿವಾಸಿ ಮಹೇಂದ್ರ ಕುಮಾರ್ ಅವರ ಪತ್ನಿ ಭಾಗ್ಯ ಎಂಬವರೇ ಸರ ಕಳೆದುಕೊಂಡವರು. ಅವರು ಯಾದವಗಿರಿ ಒಂದನೇ ಮುಖ್ಯರಸ್ತೆಯಲ್ಲಿರುವ ಮಹಿಳಾ ಸಂಘದಲ್ಲಿ ಶುಕ್ರವಾರ ಪೂಜೆ ಮುಗಿಸಿಕೊಂಡು ಮಧು ಮತ್ತು ಪುಷ್ಪಲತಾರೊಂದಿಗೆ ಆಕಾಶವಾಣಿ ಸರ್ಕಲ್ ಕಡೆ ನಡೆದುಕೊಂಡು ಹೋಗುತ್ತಿದ್ದಾಗ ಎದುರಿನಿಂದ ಕಪ್ಪು ಬಣ್ಣದ ಬಜಾಜ್ ಪಲ್ಸರ್ ಬೈಕ್ ನಲ್ಲಿ ಬಂದ ಯುವಕರಿಬ್ಬರು ಭಾಗ್ಯ ಅವರ ಕೊರಳಿನಲ್ಲಿದ್ದ 40ಗ್ರಾಂ ತೂಕದ ಮಾಂಗಲ್ಯ ಸರವನ್ನು ಕಿತ್ತುಕೊಂಡು ರಾಮಣ್ಣ ಸರ್ಕಲ್ ಕಡೆಗೆ ಪರಾರಿಯಾಗಿದ್ದಾರೆ. ಭಾಗ್ಯ ಎಚ್ಚೆತ್ತು ಜೋರಾಗಿ ಕಿರುಚಿಕೊಂಡರಾದರೂ ಅದಾಗಲೇ ಕಳ್ಳರು ಪರಾರಿಯಾಗಿದ್ದರು.

ವಿವಿಪುರಂ ಠಾಣೆಯ ಇನ್ಸಪೆಕ್ಟರ್ ವಿನಯ್ ಹಾಗೂ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಮಹಜರು ನಡೆಸಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ವಿ.ವಿ.ಪುರಂ ಪೊಲೀಸರು ಸರಗಳ್ಳರಿಗಾಗಿ ಶೋಧ ನಡೆಸುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News