‘ಚೌಕಿದಾರನೇ ಕಳ್ಳ’: ಕಾಂಗ್ರೆಸ್ ಟ್ವೀಟ್
Update: 2019-04-22 18:42 GMT
ಬೆಂಗಳೂರು, ಎ.22: 30 ಸಾವಿರ ಕೋಟಿ ರೂ.ಹಗರಣ ಮಾಡಿ, ಜೆಪಿಸಿ ತನಿಖೆಗೆ ಭಯಪಟ್ಟು ಓಡಿಹೋದ, ಸಿಬಿಐ ನಿರ್ದೇಶಕರನ್ನು ಮಧ್ಯರಾತ್ರಿ ಎತ್ತಂಗಡಿ ಮಾಡಿದ, ಸರ್ವೋಚ್ಚ ನ್ಯಾಯಾಲಯಕ್ಕೆ ಸುಳ್ಳು ಮಾಹಿತಿ ನೀಡಿದ, ದಾಖಲೆಗಳು ಕಳ್ಳತನವಾಗಿದೆ ಎಂದು ನಾಟಕವಾಡಿದ, ನಕಲಿ ದಾಖಲೆಗಳನ್ನು ಸಾಕ್ಷಿ ಎಂದು ಪರಿಗಣಿಸಬೇಡಿ ಎಂದು ಅಂಗಲಾಚಿದ, ಚೌಕಿದಾರನೇ ಕಳ್ಳ ಎಂದು ಕರ್ನಾಟಕ ಕಾಂಗ್ರೆಸ್ ಟ್ವೀಟ್ ಮಾಡಿದೆ.