ಶ್ರೀಲಂಕಾದಲ್ಲಿ ಬಾಂಬ್ ಸ್ಫೋಟ: ರಾಜ್ಯದ ಐವರ ಮೃತದೇಹ ತಡರಾತ್ರಿ ಬೆಂಗಳೂರಿಗೆ

Update: 2019-04-23 17:14 GMT

ಬೆಂಗಳೂರು, ಎ. 23: ಶ್ರೀಲಂಕಾದ ಬಾಂಬ್ ಸ್ಫೋಟ ಪ್ರಕರಣದಲ್ಲಿ ಮೃತಪಟ್ಟ ರಾಜ್ಯದ ಐದು ಮಂದಿಯ ಮೃತದೇಹಗಳು ತಡರಾತ್ರಿ ಬೆಂಗಳೂರಿಗೆ ತರಲಾಗುವುದು ಎಂದು ಸರಕಾರದ ಉಪ ಕಾರ್ಯದರ್ಶಿ(ಶಿಷ್ಟಾಚಾರ) ವಿಜಯ್ ಮಹಾಂತೇಶ್ ತಿಳಿಸಿದ್ದಾರೆ.

ಶೆಟ್ಟಿಪಾಳ್ಯದ ರಾಮಕೃಷ್ಣಪ್ಪ ನಾಗರಾಜ್, ಕಾಚನಹಳ್ಳಿಯ ಹನುಮಂತರಾಯಪ್ಪ, ಎಂ.ಲಕ್ಷ್ಮಿನಾರಾಯಣ, ಮುನಿಯಪ್ಪ ರಂಗಪ್ಪ, ಹನುಮಯ್ಯ ಶಿವಕುಮಾರ್ ಅವರ ಮೃತದೇಹಗಳು ಬುಧವಾರ ತಡರಾತ್ರಿ ಬೆಂಗಳೂರಿಗೆ ತರಲಾಗುವುದು ಎಂದು ಮಾಹಿತಿ ನೀಡಿದ್ದಾರೆ.

ರಮೇಶ್, ಅಡಕಮಾರನಹಳ್ಳಿ ಮಾರೇಗೌಡ, ಹಾರೋಕ್ಯಾತನಹಳ್ಳಿ ಪುಟ್ಟರಾಜು ಇವರ ಮೃತದೇಹಗಳು ನಾಳೆ(ಎ.24) ಶ್ರೀಲಂಕಾದಿಂದ ಬೆಂಗಳೂರಿಗೆ ತರಲಾಗುವುದು. ನಾರಾಯಣ ಚಂದ್ರಶೇಖರ್ ಹಾಗೂ ರೆಮುರೈ ತುಳಸಿರಾಮ್ ಇವರು ಮೃತಪಟ್ಟಿದ್ದು, ಇವರ ಬಗ್ಗೆ ಹೆಚ್ಚಿನ ವಿವರಗಳು ಲಭ್ಯವಾಗಿಲ್ಲ ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News