ಎರಡನೆ ಪತ್ನಿಯ ಹೆಸರು ನಮೂದಿಸದೆ ಅಫಿದಾವಿತ್ ಸಲ್ಲಿಕೆ ಆರೋಪ: ಸಿಎಂ ವಿರುದ್ಧ ಮತ್ತೊಂದು ದೂರು ದಾಖಲು
Update: 2019-04-23 17:17 GMT
ಬೆಂಗಳೂರು, ಎ.23: ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು 2018ರ ವಿಧಾನಸಭೆಯ ಸಾರ್ವತ್ರಿಕ ಚುನಾವಣೆಯಲ್ಲಿ ಅಫಿದಾವಿತ್ ಸಲ್ಲಿಸುವಾಗ 2ನೆ ಪತ್ನಿ ರಾಧಿಕ, ಮಗ ನಿಖಿಲ್ ಹಾಗೂ ಮಗಳು ಶಮಿಕಾ ಹೆಸರನ್ನು ನಮೂದಿಸಿಲ್ಲ ಎಂದು ಜನಪ್ರತಿನಿಧಿಗಳ ನ್ಯಾಯಾಲಯದ ಮುಂದೆ ಅರ್ಜಿ ಸಲ್ಲಿಕೆಯಾಗಿದೆ.
ಈ ಕುರಿತು ಪ್ರಜ್ಞಾವಂತ ನಾಗರಿಕ ಸಮಿತಿ ಅಧ್ಯಕ್ಷ ಆನಂದ್ ಅವರು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ. 2018ರ ವಿಧಾನಸಭೆ ಚುನಾವಣೆ ವೇಳೆ ಎಚ್ಡಿಕೆ ಅವರು ತಪ್ಪು ಮಾಹಿತಿ ನೀಡಿ ಅಫಿದಾವಿತ್ ಸಲ್ಲಿಸಿದ್ದಾರೆ ಎಂದು ಅರ್ಜಿದಾರರು ಅರ್ಜಿಯಲ್ಲಿ ತಿಳಿಸಿದ್ದಾರೆ.
ಜನಪ್ರತಿನಿಧಿಗಳ ಕಾಯ್ದೆ 125ಎ ಐಪಿಸಿ 181ರ ಅಡಿಯಲ್ಲಿ ಎಚ್ಡಿಕೆ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಪೀಠಕ್ಕೆ ಮನವಿ ಮಾಡಿದ್ದಾರೆ. ಅರ್ಜಿದಾರರ ಅರ್ಜಿಯನ್ನು ಸ್ವೀಕರಿಸಿರುವ ನ್ಯಾಯಾಲುವು ವಿಚಾರಣೆಯನ್ನು ಮುಂದೂಡಿದೆ.