ದಾವಣಗೆರೆಯಲ್ಲಿ ಪತ್ರಕರ್ತನ ಮೇಲೆ ಹಲ್ಲೆ

Update: 2019-05-21 09:16 GMT

ದಾವಣಗೆರೆ, ಮೇ 21: ಕೊಲೆ ಕೇಸ್ ಸಂಬಂಧ ಮಹಜರು ನಡೆಯುವ ಸ್ಥಳದಲ್ಲಿದ್ದ ಪತ್ರಕರ್ತನಿಗೆ ವ್ಯಕ್ತಿಯೋರ್ವ ಕಪಾಳಮೋಕ್ಷ ಮಾಡಿದ ಘಟನೆ ದಾವಣಗೆರೆಯಲ್ಲಿಂದು ನಡೆದಿದೆ. ಘಟನೆ ಖಂಡಿಸಿ ಬಡಾವಣೆ ಪೊಲೀಸ್ ಠಾಣೆ ಎದುರು ಪತ್ರಕರ್ತರು ಮೌನ ಪ್ರತಿಭಟನೆ ನಡೆಸಿದರು.

ಸ್ಥಳೀಯ ಪತ್ರಿಕೆ ‘ನಗರವಾಣಿ’ಯ ವರದಿಗಾರ ಶಂಭು ಹಲ್ಲೆಗೊಳಗಾದವರು. ಇವರಿಗೆ ದಫೇದಾರ್ ಮಂಜುನಾಥ ನಾಯ್ಕ ಎಂಬಾತ ಹಲ್ಲೆ ನಡೆಸಿದ್ದರೆನ್ನಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News