ದೇವಸ್ಥಾನದಲ್ಲಿ ಊಟ ಸೇವಿಸಿ ಬಾಲಕ ಸಾವು; 20 ಕ್ಕೂ ಅಧಿಕ ಮಂದಿ ಅಸ್ವಸ್ಥ

Update: 2019-05-22 07:59 GMT

ತುಮಕೂರು, ಮೇ 22: ಪಾವಗಡ ತಾಲೂಕಿನ ನಿಡಗಲ್ಲು ವೀರಭದ್ರ ಸ್ವಾಮಿ ದೇವಾಲಯದಲ್ಲಿ ಅನ್ನಪ್ರಸಾದ ಸೇವಿಸಿ  ಬಾಲಕನೊಬ್ಬ ಮೃತಪಟ್ಟು, 20ಕ್ಕೂ ಅಧಿಕ ಮಂದಿ ಅಸ್ವಸ್ಥಗೊಂಡ ಘಟನೆ  ಮಂಗಳವಾರ ವರದಿಯಾಗಿದೆ.

ವೀರಭದ್ರ (11) ಮೃತಪಟ್ಟ ಬಾಲಕ .

ಅಡುಗೆಗೆ ನೀರಿಲ್ಲದ ಕಾರಣ ತೊಟ್ಟಿಯ ನೀರು ಬಳಸಿ  ಅಡುಗೆ ಮಾಡಿದ್ದರು. ಊಟ ಮಾಡಿದ ಸ್ವಲ್ಪ ಹೊತ್ತಿನಲ್ಲೇ 20ಕ್ಕೂ ಅಧಿಕ ಮಂದಿ ಅಸ್ವಸ್ಥಗೊಂಡಿದ್ದಾರೆ ಎಂದು ತಿಳಿದು ಬಂದಿದೆ.

ಅಸ್ವಸ್ಥಗೊಂಡಿರುವ ಗಂಗಾಧರ್, ತಿಪ್ಪೇಸ್ವಾಮಿ, ರುದ್ರೇಶ್, ಪವನ್, ಅರ್ಪಿತ, ವಿರೂಪಾಕ್ಷ  ಎಂಬವರು ಸಿರಾ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News