ಸಾಲಬಾಧೆ ತಾಳಲಾರದೆ ರೈತ ಆತ್ಮಹತ್ಯೆ

Update: 2019-05-24 06:37 GMT

ತಿಪಟೂರು, ಮೇ 24: ಸಾಲಬಾಧೆ ತಾಳಲಾರದೆ ರೈತನೋರ್ವ ಆತ್ಮಹತ್ಯೆ ಮಾಡಿಕೊಂಡ ಘಟನೆ ತಿಪಟೂರು ತಾಲೂಕು ಬಿ ಗೌಡನಕಟ್ಟೆ ಗ್ರಾಮದಲ್ಲಿ ನಡೆದಿದೆ.

ಬಿ ಗೌಡನಕಟ್ಟೆ ಗ್ರಾಮ ನಿವಾಸಿ ಜಿ.ಟಿ.ಲಿಂಗರಾಜು(40) ಆತ್ಮಹತ್ಯೆ ಮಾಡಿಕೊಂಡ ರೈತ. ಇವರು ತಿಪಟೂರು ಎಸ್ ಬಿಎಂ ಬ್ಯಾಂಕ್ ಶಾಖೆಯಿಂದ ಆರು ಲಕ್ಷ ರೂ. ಸಾಲ ಪಡೆದು, ಜಮೀನು ಅಭಿವೃದ್ಧಿ ಪಡಿಸಿದ್ದರು. ಆದರೆ ಸಾಲಕ್ಕೆ ಬಡ್ಡಿ ಸೇರಿ ಒಟ್ಟು ಮೊತ್ತ 10 ಲಕ್ಷ ರೂ. ಆಗಿತ್ತೆನ್ನಲಾಗಿದೆ. ಸಾಲ ಪಾವತಿಸಲಾಗದೆ ನೊಂದು ತಮ್ಮ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಈ ಬಗ್ಗೆ ಹೊನ್ನವಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News