ಸಂಪುಟ ಪುನರ‍್ರಚನೆಯೂ ಇಲ್ಲ, ವಿಸ್ತರಣೆಯೂ ಇಲ್ಲ: ಸಿದ್ದರಾಮಯ್ಯ

Update: 2019-05-27 06:29 GMT

ಮೈಸೂರು, ಮೇ 27: ರಾಜ್ಯ ಸಂಪುಟ ಪುನರ‍್ರಚನೆಯೂ ಇಲ್ಲ, ವಿಸ್ತರಣೆಯೂ ಇಲ್ಲ. ಸಿ.ಎಸ್ ಶಿವಳ್ಳಿ ನಿಧನದಿಂದ ತೆರವಾಗಿರುವ ಸಚಿವ ಸ್ಥಾನ ಭರ್ತಿ ಅದನ್ನು ಹೊರತುಪಡಿಸಿ ಯಾವುದೇ ಪುನರ‍್ರಚನೆ ಇಲ್ಲ ಎಂದು ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ತಿಳಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ  ಅವರು ಕಾಂಗ್ರೆಸ್ ನ 1 ಮತ್ತು ಜೆಡಿಎಸ್ ನ 2 ಸ್ಥಾನ ಭರ್ತಿಯಾಗಬೇಕಿದೆ ಎಂದರು.
ಕಾಂಗ್ರೆಸ್ ನ 1 ಸ್ಥಾನ ಭರ್ತಿ ಮಾಡಲಿದೆ. ಜೆಡಿಎಸ್ ನ ವಿಚಾರ ಗೊತ್ತಿಲ್ಲ  ಎಂದು ಅಭಿಪ್ರಾಯಪಟ್ಟರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News