ಮಲಪ್ಪುರಂ ಮಾದಿನ್ ಅಕಾಡಮಿಯಲ್ಲಿ ಭಯೋತ್ಪಾದನೆ ವಿರುದ್ಧ ಬೃಹತ್ ಪ್ರತಿಜ್ಞಾವಿಧಿ ಸಮಾವೇಶಕ್ಕೆ ಯು.ಟಿ.ಖಾದರ್

Update: 2019-05-31 05:42 GMT

ಮಲಪ್ಪುರಂ , ಮೇ 31: ಇಲ್ಲಿನ ಖ್ಯಾತ ಧಾರ್ಮಿಕ ವಿದ್ಯಾಸಂಸ್ಥೆ ಮಾದಿನ್ ಅಕಾಡಮಿಯ ಕ್ರೀಡಾಂಗಣದಲ್ಲಿ ಶುಕ್ರವಾರ ಸಂಜೆ ರಮಝಾನ್ 27ರ ವಿಶೇಷ ಪ್ರಾರ್ಥನೆ ಕಾರ್ಯಕ್ರಮದ ಜೊತೆ ಭಯೋತ್ಪಾದನೆ ವಿರುದ್ಧ ಬೃಹತ್ ಪ್ರತಿಜ್ಞಾವಿಧಿ ಸಮಾವೇಶ ನಡೆಯಲಿದೆ. ಈ ಸಮಾವೇಶದಲ್ಲಿ ಸುಮಾರು ಒಂದು ಲಕ್ಷ ಜನ ಸೇರುವ ನಿರೀಕ್ಷೆ ಇದೆ. ಶುಕ್ರವಾರ ಅಸರ್ ನಮಾಝ್ ಬಳಿಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗುವುದು. 
ಕರ್ನಾಟಕದ ನಗರಾಭಿವೃದ್ಧಿ ಸಚಿವ ಯು.ಟಿ.ಖಾದರ್ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದು ಪ್ರಕಟನೆ ತಿಳಿಸಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News