ಹೆತ್ತವರು ಸಾಲ ಮರುಪಾವತಿಸದ್ದಕ್ಕಾಗಿ ಮಗುವಿನ ಹತ್ಯೆಗೈದು, ಕಣ್ಣು ಕಿತ್ತರು !

Update: 2019-06-06 16:28 GMT

ಅಲಿಗಢ, ಜೂ. 6: ದಂಪತಿಯೊಂದು 10 ಸಾವಿರ ರೂಪಾಯಿ ಸಾಲ ಮರು ಪಾವತಿಸಲು ವಿಫಲವಾದ ಹಿನ್ನೆಲೆಯಲ್ಲಿ ಅವರ ಎರಡು ವರ್ಷದ ಹೆಣ್ಣು ಮಗುವಿನ ಕತ್ತು ಹಿಸುಕಿ ಹತ್ಯೆಗೈದು, ಕಣ್ಣು ಕಿತ್ತ ಅಮಾನವೀಯ ಘಟನೆ ಉತ್ತರಪ್ರದೇಶದ ಟಪ್ಪಾಲ್ ಪಟ್ಟಣದಲ್ಲಿ ನಡೆದಿದೆ.

ಪ್ರಕರಣಕ್ಕೆ ಸಂಬಂಧಿಸಿ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

 ಮೇ 31ರಂದು ಮಗು ನಾಪತ್ತೆಯಾಗಿತ್ತು. ಜೂನ್ 2ರಂದು ಮಗುವಿನ ಮೃತದೇಹ ಮನೆಯ ಸಮೀಪದ ತ್ಯಾಜ್ಯ ವಿಲೇವಾರಿ ಪ್ರದೇಶದಲ್ಲಿ ಪತ್ತೆಯಾಗಿತ್ತು. ಮಾನವ ಶರೀರದ ಭಾಗಗಳನ್ನು ಬೀಡಾಡಿ ನಾಯಿಗಳು ಕಚ್ಚಿಕೊಂಡು ಹೋಗುತ್ತಿರುವುದನ್ನು ಗುರುತಿಸಿದ ಬಳಿಕ ಛಿದ್ರಗೊಂಡ ಮಗುವಿನ ಮೃತದೇಹ ಪತ್ತೆಯಾಗಿತ್ತು.

 ದಂಪತಿಯ ನೆರೆಯವರಾದ ಝಾಹಿದ್ ಹಾಗೂ ಅಸ್ಲಂ ಮಗುವನ್ನು ಹತ್ಯೆಗೈದಿದ್ದಾರೆ. ಸಾಲವಾಗಿ ನೀಡಿದ ಹಣದ ಕುರಿತಂತೆ ದಂಪತಿಯೊಂದಿಗೆ ನಡೆದ ವಾಗ್ವಾದದ ಕಾರಣಕ್ಕೆ ಮಗುವನ್ನು ಹತ್ಯೆಗೈಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News