ಕಾರ್ನಾಡ್ ಕಣ್ಮರೆಯಾಗಿಲ್ಲ

Update: 2019-06-10 12:57 GMT

ಕರುನಾಡ ಕಾರ್ನಾಡ್

ಕಣ್ಮರೆಯಾಗಿಲ್ಲ

ಕಾರ್ಮೋಡ ಕವಿದಿದ್ದರೂ

ಬಿತ್ತಿದ ಬೀಜಗಳು

ಜಗದಗಲ ಫಲ ನೀಡಲಿದೆ

ಹೌದು ಇಲ್ಲಿ ಆಕ್ಸಿಜನ್ ಇದ್ದರೂ

ಉಸಿರಾಡುವುದು ಕಷ್ಟ

ಹವಾಮಾನದಲ್ಲಿ ಸೇರಿದ ವಿಷ

ಸಾವನ್ನು ಬಯಸುತ್ತೆ

ವಿಕೃತರಿಗೊಂದು ನೆನಪಿರಲಿ

ಜೀವಪರರ ಸಾವು ಸಾವಲ್ಲ

ಬದುಕಿನ ಆರಂಭ

ಅವರು ತಲೆ ತಲೆಮಾರುಗಳಾಚೆಗೂ

ಅಮರವಾಗಿಬಿಡುತ್ತಾರೆ

ಒಂದಾನೊಂದು ಕಾಲದಲ್ಲಿ

ಶಂಕರನ ವೇಗಕ್ಕೆ ಬೆನ್ನೆಲುಬಾಗಿ

ವಂಶ ವೃಕ್ಷದ ವಿಷ್ಣುವಿಗೆ ಸಾರಥಿಯಾಗಿದ್ದ

ಕಾರ್ನಾಡ್ ಪ್ರಜ್ಞಾವಂತರಿಗೆ

ಸ್ಫೂರ್ತಿಯಾಗಿ ಬದುಕುಳಿಯುತ್ತಾರೆ

ಕಾರ್ನಾಡ್ ಸರ್ ನಮಗೂ ಭರವಸೆಯಿದೆ

ಈ ನೆಲದಲ್ಲಿ ಸೌಹಾರ್ದದ ಬೇರು ತಳವೂರಲಿದೆ

ಆಕಾಶದಲ್ಲಿ ನಿರ್ಭೀತಿಯ ರೆಕ್ಕೆಗಳು ಹಾರಲಿದೆ

ಬೆಳಕು ಕಳೆದುಕೊಂಡ ದಾರಿಯುದ್ದಕ್ಕೂ

ಕನಸಿನ ಕಿರಣಗಳು ಪ್ರಜ್ವಲಿಸಲಿದೆ.

Writer - -ಅಕ್ಬರ್ ಅಲಿ, ಕಾವಳಕಟ್ಟೆ

contributor

Editor - -ಅಕ್ಬರ್ ಅಲಿ, ಕಾವಳಕಟ್ಟೆ

contributor

Similar News

ಸಲ್ಮಾತು