ಮನೆ ಮೇಲೆ ಉರುಳಿ ಬಿದ್ದ ಟಿಪ್ಪರ್

Update: 2019-06-12 12:59 GMT

ಚಿಕ್ಕಮಗಳೂರು, ಜೂ.12: ಜಿಲ್ಲೆಯ ಕೊಪ್ಪ ತಾಲೂಕಿನ ಜಯಪುರ ಸಮೀಪದ ಜಲದುರ್ಗ ಗ್ರಾಮದ ಬಳಿ ರಸ್ತೆ ಬದಿಯ ಹೊಂಡಲದಲಿದ್ದ ಪುಟ್ಟಪ್ಪ ಎಂಬವರ ಮನೆ ಮೇಲೆ ಚಾಲಕನ ನಿಯಂತ್ರಣ ತಪ್ಪಿದ ಟಿಪ್ಪರ್ ಲಾರಿಯೊಂದು ಉರುಳಿ ಬಿದ್ದಿದೆ. ಘಟನೆಯಲ್ಲಿ ಮನೆ ಭಾಗಶಃ ಜಖಂಗೊಂಡಿದ್ದು, ಯಾವುದೇ ಪ್ರಾಣಾಪಾಯವಾಗಿಲ್ಲ. 

ಲಾರಿ ಶೃಂಗೇರಿ ಮೂಲದ ರಮೇಶ್ ರವರಿಗೆ ಸೇರಿದ್ದು, ಚಾಲಕ ಗಿರೀಶ್ ಗೆ ಸಣ್ಣಪುಟ್ಟ ಗಾಯಗಳಾಗಿವೆ. ಮನೆಯ ಸದಸ್ಯರು ಬೆಳಗ್ಗೆ ಕೆಲಸದ ನಿಮಿತ್ತ ಮನೆಯಿಂದ ಹೊರ ಹೋಗಿದ್ದರಿಂದ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ ಎಂದು ತಿಳಿದು ಬಂದಿದೆ.

ಎದುರಿನಿಂದ ವಾಹನವೊಂದು ಬಂದಾಗ ಲಾರಿಯನ್ನು ರಸ್ತೆ ಬದಿಗೆ ಕೊಂಡೊಯ್ದ ಸಂದರ್ಭ ಲಾರಿ ಚಾಲಕನ ನಿಯಂತ್ರ ತಪ್ಪಿ ಹೊಂಡಕ್ಕುರುಳಿದೆ ಎಂದು ತಿಳಿದುಬಂದಿದ್ದು, ಮನೆಯ ಮೇಲ್ಚಾವಣಿ ಹಾಗೂ ಗೋಡೆ ಜಖಂ ಗೊಂಡಿದೆ. ನಂತರ ಕ್ರೇನ್‍ನ ಸಹಯದಿಂದ ಲಾರಿಯನ್ನು ಮೇಲಕ್ಕೆತ್ತಲಾಗಿದೆ. ಜಯಪುರ ಪೊಲೀಸರು ಸ್ಥಳ ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News