ಐಎಂಎ ಜ್ಯೂವೆಲ್ಲರ್ಸ್ ಮಾಲಕ ಮನ್ಸೂರ್ ಖಾನ್ ಜೂ.8ರಂದೇ ದುಬೈಗೆ ಪರಾರಿ

Update: 2019-06-14 06:06 GMT

ಬೆಂಗಳೂರು, ಜೂ.14: ಸಾವಿರಾರು ಮಂದಿಗೆ ಕೋಟ್ಯಂತರ ರೂ.ವಂಚಿಸಿರುವ ಪ್ರಕರಣದ ಆರೋಪಿ ಐಎಂಎ ಜ್ಯೂವೆಲ್ಲರ್ಸ್ ಮಾಲಕ ಮುಹಮ್ಮದ್ ಮನ್ಸೂರ್ ಖಾನ್ ಜೂನ್ 8ರಂದೇ  ದುಬೈಗೆ ಪರಾರಿಯಾಗಿರುವ ವಿಚಾರ ಪೊಲೀಸ್ ತನಿಖೆಯಿಂದ ಬೆಳಕಿಗೆ ಬಂದಿದೆ.

ರಾತ್ರಿ 8:45ರ  ಎಮಿರೆಟ್ಸ್ ಫ್ಲೈಟ್ ನಲ್ಲಿ ಕೆಂಪೇಗೌಡ ಅಂತರ್ ರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಪರಾರಿಯಾಗಿದ್ದಾನೆ ಎನ್ನಲಾಗಿದೆ.

ಈತ ವಿದೇಶಕ್ಕೆ ತೆರಳುವ ಮೊದಲು 19 ಕೋಟಿ ರೂ. ಈತನ ಖಾತೆಗೆ ವರ್ಗಾವಣೆಯಾಗಿದೆ ಎನ್ನಲಾಗಿದೆ. 

 ಈ ನಡುವೆ ಐಎಂಎ ಸಂಸ್ಥೆಯ ಆಡಿಟರ್ ಇಕ್ಬಾಲ್ ಖಾನ್ ರನ್ನು ತನಿಖಾ ತಂಡ ಎಸ್ಐಟಿ  ವಶಕ್ಕೆ ತೆಗೆದುಕೊಂಡಿದೆ.

 ಐ ಎಂಎ ಸಂಸ್ಥೆಯಿಂದ ವಂಚನೆಗೊಳಗಾದ  ಮಹಿಳೆಯರು  ‘ಲೇಡಿಸ್ ಐಎಂಎ ಗ್ರೂಪ್'  ಎಂಬ ವಾಟ್ಸಾಪ್ ಗ್ರೂಪ್ ನ್ನು ರಚಿಸಿದ್ದಾರೆ. ಕೇಸ್ ಸಂಬಂಧ ಮಾಹಿತಿಯನ್ನು ಹಂಚಿಕೊಳ್ಳಲು ಗ್ರೂಪ್  ರಚಿಸಲಾಗಿದೆ ಎಂದು ತಿಳಿದು ಬಂದಿದೆ.  

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News