ರಸ್ತೆ ಅಪಘಾತ: ಚಿಕ್ಕಮಾಲಪುರ ಗ್ರಾ.ಪಂ ಮಾಜಿ ಉಪಾದ್ಯಕ್ಷ ಮೃತ್ಯು
Update: 2019-06-15 12:01 GMT
ಹನೂರು, ಜೂ.15: ತಾಲೂಕಿನ ಚಿಕ್ಕಮಾಲಪುರ ಗ್ರಾಮ ಪಂಚಾಯತ್ ಮಾಜಿ ಉಪಾದ್ಯಕ್ಷ ಹಾಗೂ ಹಾಲಿ ಸದಸ್ಯ ಪುಟ್ಟುಸ್ವಾಮಿ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾರೆ.
ಶುಕ್ರವಾರ ರಾತ್ರಿ ಚಿಕ್ಕಮಾಲಪುರದಿಂದ ಯಾವುದೋ ಕಾರ್ಯನಿಮಿತ್ತ ಹನೂರು ಪಟ್ಟಣಕ್ಕೆ ತನ್ನ ಪುತ್ರನ ಜೊತೆ ಬೈಕ್ ನಲ್ಲಿ ತೆರಳುತ್ತಿದ್ದಾಗ ಮಾರ್ಗಮಧ್ಯೆ ರಸ್ತೆ ಅಪಘಾತ ಸಂಭವಿಸಿದ್ದು, ಹಿಂಬದಿಯಲ್ಲಿ ಕುಳಿತಿದ್ದ ಪುಟ್ಟಸ್ವಾಮಿಗೆ ತೀವ್ರ ಪೆಟ್ಟಾಗಿದ್ದರಿಂದ ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಚಿಕಿತ್ಸೆ ಫಲಾಕಾರಿಯಾಗದೆ ಶನಿವಾರ ಅವರು ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.