ಐಎಂಎ ವಂಚನೆ ಪ್ರಕರಣ: ಹೃದಯಾಘಾತದಿಂದ ಮಹಿಳೆ ಮೃತ್ಯು

Update: 2019-06-15 16:16 GMT

ಮೈಸೂರು,ಜೂ.15: ಬೆಂಗಳೂರಿನ ಐಎಂಎ ಜ್ಯುವೆಲ್ಸ್ ನಲ್ಲಿ ಹೂಡಿದ್ದ ಹಣ ವಂಚನೆಯಾಗಿದೆ ಎಂಬುದು ತಿಳಿಯುತ್ತಿದ್ದಂತೆ ಮಹಿಳೆಯೊಬ್ಬರು ಹೃದಯಾಘಾತದಿಂದ ಸಾವನ್ನಪ್ಪಿರುವ ಘಟನೆ ಮೈಸೂರಿನಲ್ಲಿ ನಡೆದಿದೆ.

ನಗರದ ಉದಯಗಿರಿ ನಿವಾಸಿ ಸಫೂರಾಬಿ (60) ಎಂದು ಹೇಳಲಾಗಿದೆ. ಇವರ ಪತಿ ರೆಹಮಾನ್ ಖಾನ್ ಬೆಂಗಳೂರಿನ ಐಎಂಎ ಜ್ಯುವೆಲ್ಸ್ ನಲ್ಲಿ 4.50 ಲಕ್ಷ ರೂ. ಹಣ ಹೂಡಿಕೆ ಮಾಡಿದ್ದರು ಎನ್ನಲಾಗಿದೆ. ಕಂಪನಿ ಮೋಸ ಮಾಡಿರುವ ವಿಷಯ ತಿಳಿದ ತಕ್ಷಣ ಸಫೂರಾಬಿ ಆಘಾತಗೊಂಡು ಹೃದಯಾಘಾತವಾಗಿ ಆಸ್ಪತ್ರೆಗೆ ದಾಖಲಾಗಿದ್ದರು. ಕಳೆದ ನಾಲ್ಕು ದಿನಗಳಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು ಚಿಕಿತ್ಸೆ ಫಲಕಾರಿಯಾಗದೆ ಶನಿವಾರ ಸಾವನ್ನಪ್ಪಿದ್ದಾರೆ.

ಈ ಸಂಬಂಧ ಮೃತರ ಮನೆಗೆ ಆಗಮಿಸಿದ ಬಂಧುಗಳು ಮತ್ತು ಐಎಂಎ ಜ್ಯುವೆಲ್ಸ್ ನಿಂದ ಮೋಸ ಹೋದವರು ತಮಗೆ ನ್ಯಾಯ ದೊರಕಿಸಿ ಕೊಂಡುವಂತೆ ಒತ್ತಾಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News