ಪತ್ನಿ ಮದ್ಯ ಸೇವನೆಗೆ ಹಣ ನೀಡಿಲ್ಲ ಎಂಬ ಕಾರಣಕ್ಕೆ ಪತಿ ಆತ್ಮಹತ್ಯೆ

Update: 2019-06-20 05:19 GMT

ಮುಂಡಗೋಡ, ಜೂ.20: ಪತ್ನಿ ಮದ್ಯ ಸೇವನೆಗೆ ಹಣ ನೀಡಲಿಲ್ಲ ಎಂದು ಬೇಸರ ಪಟ್ಟಿಕೊಂಡು ವ್ಯಕ್ತಿಯೊರ್ವ ನೇಣು ಬೀಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ತಾಲೂಕಿನ ಕರಗಿನಕೊಪ್ಪಗ್ರಾಮದಲ್ಲಿ ನಡೆದಿದೆ

ಕರಗಿನಕೊಪ್ಪ ಗ್ರಾಮದ ಧರ್ಮಣ್ಣ ಭೋವಿವಡ್ಡರ(48) ಆತ್ಮಹತ್ಯೆ ಮಾಡಿಕೊಂಡವರು.

ಮದ್ಯ ವ್ಯೆಸನಿಯಾಗಿದ್ದ ಧರ್ಮಣ್ಣ ಪತ್ನಿಯಲ್ಲಿ ಮದ್ಯ ಸೇವಿಸಲು ಹಣ ಕೇಳಿದ್ದರೆನ್ನಲಾಗಿದೆ. ಆದರೆ ಪತ್ನಿ ಹಣ ಕೊಡದೆ ಇರುವುದರಿಂದ ಬೇಸತ್ತು ಹೊಲಕ್ಕೆ ತೆರಳಿ ಅಲ್ಲಿರುವ ಗುಡಿಸಲಿನಲ್ಲಿ ನೇಣು ಬಿಗಿದುಕೊಂಡಿದ್ದಾರೆ. ಇದನ್ನು ಗಮನಿಸಿದ ಮನೆಮಂದಿ ಅವರನ್ನು ರಕ್ಷಿಸಿ ಚಿಕಿತ್ಸೆಗಾಗಿ ಹುಬ್ಬಳ್ಳಿಯ ಕಿಮ್ಸಗೆ ದಾಖಲಿಸಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಬುಧವಾರ ಮುಂಜಾನೆ ಅವರು ಕೊನೆಯುಸಿರೆಳೆದಿದ್ದಾರೆ ಎಂದು ಹೇಳಲಾಗಿದೆ.

ಈ ಕುರಿತು ಮುಂಡಗೋಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News