ಚೇತರಿಕೆಯ ಹಾದಿಯಲ್ಲಿ ಭುವನೇಶ್ವರ, ನೆಟ್ ಬೌಲರ್ ಆಗಿ ಸೈನಿ ಸೇರ್ಪಡೆ

Update: 2019-06-25 18:31 GMT

ಹೊಸದಿಲ್ಲಿ, ಜೂ.25: ಪಾಕಿಸ್ತಾನ ವಿರುದ್ಧ ಜೂ.16 ರಂದು ನಡೆದ ವಿಶ್ವಕಪ್ ಪಂದ್ಯದ ವೇಳೆ ಸ್ನಾಯು ಸೆಳೆತಕ್ಕೆ ಒಳಗಾಗಿರುವ ಹಿರಿಯ ವೇಗದ ಬೌಲರ್ ಭುವನೇಶ್ವರ ಕುಮಾರ್ ಚೇತರಿಕೆಯ ಹಾದಿಯಲ್ಲಿದ್ದಾರೆ. ನವದೀಪ್ ಸೈನಿ ಮ್ಯಾಂಚೆಸ್ಟರ್‌ಗೆ ತೆರಳಿದ್ದು, ಕೇವಲ ನೆಟ್ ಬೌಲರ್ ರೂಪದಲ್ಲಿ ಭಾರತೀಯ ಕ್ರಿಕೆಟ್ ತಂಡದೊಂದಿಗೆ ತರಬೇತಿ ನಡೆಸಲಿದ್ದಾರೆ ಎಂದು ಬಿಸಿಸಿಐ ಹೇಳಿಕೆಯೊಂದರಲ್ಲಿ ತಿಳಿಸಿದೆ.

ಎ.15 ರಂದು ಟೀಮ್ ಇಂಡಿಯಾ 15 ಸದಸ್ಯರನ್ನು ಒಳಗೊಂಡ ವಿಶ್ವಕಪ್ ತಂಡವನ್ನು ಆಯ್ಕೆ ಮಾಡಿದ ಸಂದರ್ಭದಲ್ಲಿ ನೇಮಿಸಲಾಗಿದ್ದ ಐವರು ಮೀಸಲು ಆಟಗಾರರ ಪೈಕಿ ಸೈನಿ ಕೂಡ ಒಬ್ಬರು. ಮೀಸಲು ಆಟಗಾರರ ಪಟ್ಟಿಯಲ್ಲಿರುವ ಆಟಗಾರರು ಇಂಗ್ಲೆಂಡ್‌ಗೆ ನೆಟ್ ಬೌಲರ್‌ಗಳಾಗಿ ತೆರಳಲಿದ್ದಾರೆ.

 ಭಾರತ ತಂಡದ ಪರ ಇನ್ನಷ್ಟೇ ಆಡಬೇಕಾಗಿರುವ ದಿಲ್ಲಿ ರಣಜಿ ತಂಡದ ವೇಗದ ಬೌಲರ್ ಸೈನಿ ಈ ವರ್ಷದ ಐಪಿಎಲ್‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಅತ್ಯುತ್ತಮ ಪ್ರದರ್ಶನ ನೀಡುವ ಮೂಲಕ ಟೀಮ್ ಮ್ಯಾನೇಜ್‌ಮೆಂಟ್ ಹಾಗೂ ಆಯ್ಕೆಗಾರರ ಗಮನಸೆಳೆದಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News