ಶಾಸಕರು ನನಗೆ ನಿಷ್ಠರಾಗಿರುವುದು ಬೇಡ ,ಪಕ್ಷಕ್ಕೆ ನಿಷ್ಠರಾಗಲಿ: ಸಿದ್ದರಾಮಯ್ಯ

Update: 2019-07-07 09:27 GMT

ಬೆಂಗಳೂರು, ಜು.7: ಅತೃಪ್ತ ಕಾಂಗ್ರೆಸ್ ಶಾಸಕರು ನಮಗೆ ಸಿದ್ದರಾಮಯ್ಯರು ನಾಯಕರು ಅವರು ಮುಖ್ಯ ಮಂತ್ರಿಯಾಗಲಿ ಎಂದು ನೀಡಿರುವ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ  ಅವರು “ ನನಗೆ ನಿಷ್ಠರಾಗಿರುವುದು ಬೇಡ. ಪಕ್ಷಕ್ಕೆ ನಿಷ್ಠರಾಗಲಿ’’ ಎಂದು ಪ್ರತಿಕ್ರಿಯೆ ನೀಡಿದ್ದಾರೆ.

ರಾಜೀನಾಮೆ ನೀಡಿರುವ ಕಾಂಗ್ರೆಸ್ ಶಾಸಕರು  ಸಿದ್ದರಾಮಯ್ಯ ಮುಖ್ಯಮಂತ್ರಿಯಾದರೆ ನಾವು ಪಕ್ಷಕ್ಕೆ ವಾಪಸಾಗುತ್ತೇವೆ ಎಂಬ ಬೇಡಿಕೆಯನ್ನು ಹೈಕಮಾಂಡ್ ಮುಂದಿಟ್ಟಿದ್ದಾರೆ.

ಅತೃಪ್ತ ಶಾಸಕರ ಮನವೊಲಿಸಲು  ಸಚಿವ ಡಿಕೆ ಶಿವಕುಮಾರ್ ಮತ್ತು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ನಡೆಸಿದ್ದ ಪ್ರಯತ್ನ ವಿಫಲವಾಗಿತ್ತು.

ಎಐಸಿಸಿ ಪ್ರಧಾನ ಕಾರ್ಯದರ್ಶಿ ಮತ್ತು ರಾಜ್ಯ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ಅವರು ಅತೃಪ್ತ ಶಾಸಕರನ್ನು ಕರೆಸಿ ಮಾತುಕತೆ ಆರಂಭಿಸಿದ್ದಾರೆ ಎಂದು ತಿಳಿದು ಬಂದಿದೆ.

READ THIS STORY IN ENGLISH

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News