ಸ್ವೀಕರ್ ನಿಷ್ಪಕ್ಷಪಾತ ಕ್ರಮ ಕೈಗೊಳ್ಳುತ್ತಾರೆ: ಬಿಜೆಪಿ ಮುಖಂಡ ಆರ್.ಅಶೋಕ್

Update: 2019-07-07 17:43 GMT

ಬೆಂಗಳೂರು, ಜು.7: ಕಾಂಗ್ರೆಸ್ ಶಾಸಕರು ಸ್ವಇಚ್ಛೆಯಿಂದ ರಾಜೀನಾಮೆ ಸಲ್ಲಿಸಿರುವ ಹಿನ್ನಲೆ, ಸ್ವೀಕರ್ ರಮೇಶ್ ಕುಮಾರ್ ನಿಷ್ಪಕ್ಷಪಾತವಾಗಿ ಕ್ರಮ ಕೈಗೊಳ್ಳುತ್ತಾರೆ ಎಂದು ಬಿಜೆಪಿ ಮುಖಂಡ ಆರ್.ಅಶೋಕ್ ತಿಳಿಸಿದರು.

ರವಿವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಮತ್ತು ಜೆಡಿಎಸ್ ಶಾಸಕರು ರಾಜೀನಾಮೆ ಕೊಟ್ಟಿದ್ದಾರೆ.ಆದರೆ, ನಮಗೆ ರಾಜ್ಯದಲ್ಲಿ ಏನಾಗುತ್ತಿದೆ ಎಂಬುವುದು ಸ್ಪಷ್ಟವಾಗಿ ತಿಳಿಯುತ್ತಿಲ್ಲ ಎಂದು ಹೇಳಿದರು.

ಸರಕಾರ ಪತನ ಕುರಿತು ಗೊತ್ತಿಲ್ಲ, ಮೈತ್ರಿ ಸರಕಾರ ಗಾಳಿಪಟ ಇದ್ದಂತೆ. ಆಗಸದಲ್ಲಿ ಹಾರಾಡುತ್ತಿದೆ. ಹೀಗಾಗಿ, ಗಾಳಿಪಾಟದ ದರ ವಿದ್ಯುತ್ ಕಂಬಕ್ಕೆ ಸಿಲುಕುತ್ತಾ, ರಸ್ತೆಯಲ್ಲಿ ಬೀಳುತ್ತಾ ಅಥವಾ ಹೊಳೆನರಸೀಪುರದ ಹೊಳೆಯಲ್ಲಿ ಬೀಳುತ್ತಾ ಗೊತ್ತಿಲ್ಲ ಎಂದು ವ್ಯಂಗ್ಯವಾಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News