ಶಬನಾ ಅಝ್ಮಿ ‘ಟುಕ್ಡೆ ಟುಕ್ಡೆ’ ಗ್ಯಾಂಗ್‌ನ ನೂತನ ನಾಯಕಿ ಎಂದ ಗಿರಿರಾಜ್ ಸಿಂಗ್

Update: 2019-07-08 16:36 GMT

ಹೊಸದಿಲ್ಲಿ, ಜು.8: ಹಿರಿಯ ನಟಿ ಶಬನಾ ಅಝ್ಮಿ ಸರಕಾರವನ್ನು ಟೀಕಿಸುವ ಮೂಲಕ ದೇಶದ ಹಿತಾಸಕ್ತಿಯನ್ನು ನಾಶಗೊಳಿಸುತ್ತಿದ್ದಾರೆ ಎಂದು ಆರೋಪಿಸಿರುವ ಕೇಂದ್ರ ಸಚಿವ ಗಿರಿರಾಜ ಸಿಂಗ್, ಶಬಾನಾ ‘ಟುಕ್ಡೆ ಟುಕ್ಡೆ ಗ್ಯಾಂಗ್’ ಮತ್ತು ‘ಪ್ರಶಸ್ತಿ ಮರಳಿಸುವ ಗ್ಯಾಂಗ್’ನ ನೂತನ ನಾಯಕಿಯಾಗಿದ್ದಾರೆ ಎಂದು ಟೀಕಿಸಿದ್ದಾರೆ.

ಸರಕಾರವನ್ನು ಟೀಕಿಸುವವರನ್ನು ದೇಶ ವಿರೋಧಿಗಳೆಂದು ಹಣೆಪಟ್ಟಿ ಹಚ್ಚಲಾಗುತ್ತಿದೆ ಎಂದು ಶಬಾನಾ ಇತ್ತೀಚೆಗೆ ಹೇಳಿಕೆ ನೀಡಿದ್ದರು. ಇದಕ್ಕೆ ಪ್ರತಿಕ್ರಿಯಿಸಿರುವ ಸಿಂಗ್, ಶಬಾನಾ ‘ಟುಕ್ಡೆ ಟುಕ್ಡೆ’ ಮತ್ತು ಪ್ರಶಸ್ತಿ ಮರಳಿಸುವ ಗ್ಯಾಂಗ್‌ನ ಹೊಸ ಸಾರಥಿಯಾಗಿದ್ದಾರೆ ಎಂದು ಹಿಂದಿಯಲ್ಲಿ ಟ್ವೀಟ್ ಮಾಡಿದ್ದಾರೆ.

ಸಿಂಗ್ ಟೀಕೆಗೆ ಉತ್ತರಿಸಿರುವ ಶಬನಾ, ತನ್ನ ಹೇಳಿಕೆ ಬಿಜೆಪಿ ಸರಕಾರಕ್ಕೆ ಮಾತ್ರ ಅನ್ವಯಿಸುವುದಿಲ್ಲ. ಈ ಹಿಂದೆ 1989ರಲ್ಲಿ ಕಾಂಗ್ರೆಸ್ ಸರಕಾರವಿದ್ದಾಗ, ನಾಟಕಕಾರ ಸಫ್ದರ್ ಹಾಶ್ಮಿಯ ಹತ್ಯೆಯಾದಾಗಲೂ ತಾನು ಸರಕಾರವನ್ನು ಟೀಕಿಸಿದ್ದೆ. ನಾವು ಗಂಗಾ-ಜಮುನ (ಸಂಘಟಿತ) ಸಂಸ್ಕೃತಿಯಲ್ಲಿ ಬೆಳೆದವರು. ಪರಿಸ್ಥಿತಿಗೆ ಶರಣಾಗಬಾರದು, ಅದನ್ನು ಎದುರಿಸಿ ಹೋರಾಡಬೇಕು. ದೇಶದ ಜನತೆಯನ್ನು ವಿಭಜಿಸುವ ಯಾವುದೇ ಪ್ರಯತ್ನ ದೇಶಕ್ಕೆ ಶ್ರೇಯಸ್ಕರವಲ್ಲ ಎಂದು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News