ಕಪ್ಪೆಗಳಿಗೆ ಮದುವೆ ಮಾಡಿ ಮಳೆಗಾಗಿ ಪ್ರಾರ್ಥನೆ

Update: 2019-07-16 17:57 GMT

ಮಡಿಕೇರಿ, ಜು.16: ಮುಂಗಾರು ಕೈ ಕೊಟ್ಟು ರೈತರು, ಜನ ಜಾನುವಾರುಗಳಿಗೆ ನೀರಿಲ್ಲದೆ ಪರದಾಡುವಂತಾಗಿದ್ದು, ಜಿಲ್ಲೆಯಲ್ಲಿ ಬರಗಾಲದ ಛಾಯೆ ಎದ್ದು ಕಾಣುತ್ತಿದ್ದುದರಿಂದ ಕಂಗೆಟ್ಟ ಕೂಡಿಗೆಯ ಮಲ್ಲೇನಹಳ್ಳಿ ಗ್ರಾಮದ ರೈತರು ಮಳೆಗಾಗಿ ಕಪ್ಪೆಗಳ ಮದುವೆಯನ್ನು ಮಾಡಿ ಪ್ರಾರ್ಥಿಸಿದ ಪ್ರಸಂಗ ನಡೆಯಿತು.  

ಇಲ್ಲಿನ ಗ್ರಾಮಸ್ಥರು ಸಮೀಪದ ಹಳ್ಳದಿಂದ ಗಂಡು ಮತ್ತು ಹೆಣ್ಣುಕಪ್ಪೆಯನ್ನು ಹಿಡಿದು ತಂದು ರೈತರೊಬ್ಬರ ಜಮೀನಿನ ಮರವೊಂದರ ಕೆಳಭಾಗದಲ್ಲಿ ಚಪ್ಪರ ನಿರ್ಮಿಸಿ ಸಿಂಗರಿಸಿ, ಎರಡು ಕಪ್ಪೆಗಳಿಗೆ ಶಾಸ್ತ್ರೋಕ್ತವಾಗಿ ಮದುವೆ ಮಾಡಿದರು. ಕಪ್ಪೆಗಳ ಮದುವೆಗೂ ಊಟದ ವ್ಯವಸ್ಥೆ ಮಾಡಲಾಗಿತ್ತು. ಮನುಷ್ಯರ ಮದುವೆಯ ಸಂಪ್ರದಾಯದಂತೆಯೇ ಈ ಕಪ್ಪೆಗಳ ಮದುವೆಯೂ ಮಳೆಗಾಗಿ ನಡೆಯಿತು. 

ಕಪ್ಪೆಗಳ ಮದುವೆ ಮಾಡಿದ ನಂತರ ರೈತರು ಮಳೆಗಾಗಿ ಪ್ರಾರ್ಥಿಸಿದರು. ಈ ಸಂದರ್ಭ ಗ್ರಾಮಸ್ಥರಾದ ಮಂಜುನಾಥ್, ಗೋವಿಂದ, ಗಿರೀಶ್, ಗಣೇಶ್, ನಾಗರಾಜ್, ಚಿಣ್ಣಪ್ಪ, ಶೋಭ, ಮಂಜಮ್ಮ, ಸುಶೀಲಮ್ಮ ಸೇರಿದಂತೆ ಊರಿನ ರೈತರು, ಗ್ರಾಮಸ್ಥರು ಕಪ್ಪೆಗಳ ಮದುವೆಗೆ ಸಾಕ್ಷಿಯಾದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News