ರಾಜ್ಯ ವಕ್ಫ್ ಮಂಡಳಿಗೆ‌ ಸದಸ್ಯರ ನಾಮ ನಿರ್ದೇಶನ

Update: 2019-07-20 16:39 GMT

ಬೆಂಗಳೂರು, ಜು.20: ರಾಜ್ಯ ಸರಕಾರವು ಕರ್ನಾಟಕ ರಾಜ್ಯ ವಕ್ಫ್ ಮಂಡಳಿಗೆ ವಕ್ಫ್ ಕಾಯಿದೆ 1992 ಹಾಗೂ ತಿದ್ದುಪಡಿ ಕಾಯಿದೆ 2013ರ ನಿಯಮ 14(1)ಸಿ ಮತ್ತು ಡಿ ರನ್ವಯ ನಾಲ್ವರು ಸದಸ್ಯರನ್ನು ನಾಮ ನಿರ್ದೇಶನಗೊಳಿಸಿ ಶನಿವಾರ ಆದೇಶ ಹೊರಡಿಸಿದೆ.

ಶೈಕ್ಷಣಿಕ/ಆರ್ಥಿಕ ಹಾಗೂ ಬ್ಯಾಂಕಿಂಗ್/ಸಾಮಾಜಿಕ ಚಟುವಟಿಕೆ ವರ್ಗದಡಿ ನಸೀರ್ ಅಹಮದ್, ಸುನ್ನಿ ಧಾರ್ಮಿಕ ಗುರುಗಳ ವರ್ಗದಡಿ ಮೌಲಾನ ಮುಹಮ್ಮದ್ ಮಕ್ಸೂದ್ ಇಮ್ರಾನ್, ಶಿಯಾ ಧಾರ್ಮಿಕ ಗುರುಗಳ ವರ್ಗದಡಿ ಮೌಲಾನ ಮೀರ್ ಖೈಮ್ ಅಬ್ಬಾಸ್ ಹಾಗೂ ಸರಕಾರಿ ಅಧಿಕಾರಿಯ ವರ್ಗದಡಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಆಯ್ಕೆ ಶ್ರೇಣಿ ಅಧಿಕಾರಿ ಎಸ್.ಎ.ಅಶ್ರಫುಲ್ ಹಸನ್ ಅವರನ್ನು ವಕ್ಫ್ ಮಂಡಳಿಯ ಸದಸ್ಯರನ್ನಾಗಿ ನಾಮ ನಿರ್ದೇಶನಗೊಳಿಸಲಾಗಿದೆ.

ಈ ಸದಸ್ಯರ ಅಧಿಕಾರವಧಿ ಐದು ವರ್ಷದವರೆಗೆ ಅಥವಾ ಮುಂದಿನ ಆದೇಶದವರೆಗೆ, ಇದರಲ್ಲಿ ಯಾವುದು ಮೊದಲೊ ಅಲ್ಲಿಯವರೆಗೆ ನೇಮಿಸಲಾಗಿದೆ ಎಂದು ಅಲ್ಪಸಂಖ್ಯಾತರ ಕಲ್ಯಾಣ, ಹಜ್ ಮತ್ತು ವಕ್ಫ್ ಇಲಾಖೆಯ ಉಪ ಕಾರ್ಯದರ್ಶಿ ವೈ.ಎಸ್.ದಳವಾಯಿ ಅಧಿಸೂಚನೆ ಹೊರಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News