ಮೀನು ಹಿಡಿಯಲು ತೆರಳಿದ್ದ ಯುವಕ ನೀರುಪಾಲು
Update: 2019-07-20 18:21 GMT
ಶಿವಮೊಗ್ಗ, ಜು. 20: ಮೀನು ಹಿಡಿಯಲು ತೆರಳಿದ್ದ ಯುವಕನೋರ್ವ ಆಕಸ್ಮಿಕವಾಗಿ ನೀರಿಗೆ ಬಿದ್ದು ಮೃತಪಟ್ಟಿರುವ ಘಟನೆ ಜಿಲ್ಲೆಯ ಹೊಸನಗರ ತಾಲೂಕಿನ ಬೆಕ್ಕೋಡಿ ಲಾಂಚ್ ಬಳಿ ನಡೆದಿದೆ.
ಕೆ. ಹುಣಸವಳ್ಳಿ ಸಮೀಪದ ದಣಂದೂರು ಗ್ರಾಮದ ನಿವಾಸಿ ರಾಕೇಶ್ (25) ಮೃತಪಟ್ಟ ಯುವಕ ಎಂದು ಗುರುತಿಸಲಾಗಿದೆ. ಈ ಸಂಬಂಧ ಹೊಸನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.