ಸಚಿವ ಸಾ.ರಾ.ಮಹೇಶ್-ಶಾಸಕ ಎಚ್.ವಿಶ್ವನಾಥ್ ಬೆಂಬಲಿಗರ ನಡುವೆ ವಾಕ್ಸಮರ

Update: 2019-07-21 18:23 GMT

ಮೈಸೂರು,ಜು.21: ರಾಜ್ಯ ರಾಜಕಾರಣ ಸಂಕಷ್ಟದ ಪರಿಸ್ಥಿತಿಯನ್ನು ಎದುರಿಸುತ್ತಿರುವ ಸಂದರ್ಭದಲ್ಲೇ ಸಚಿವ ಸಾ.ರಾ.ಮಹೇಶ್ ಮತ್ತು ಶಾಸಕ ಎಚ್.ವಿಶ್ವನಾಥ್ ಬೆಂಬಲಿಗರ ನಡುವೆ ವಾಕ್ಸಮರ ತಾರಕಕ್ಕೇರಿದೆ.

ಹುಣಸೂರು ತಾಲೂಕು ಯುವ ಘಟಕದ ಅಧ್ಯಕ್ಷ ಲೋಕೇಶ್ ಎಂಬವರು, ಸಚಿವ ಸಾ.ರಾ.ಮಹೇಶ್ ಅವರೊಂದಿಗೆ ದೂರವಾಣಿಯಲ್ಲಿ ಮಾತನಾಡಿ ಬೆದರಿಕೆ ಹಾಕಿದ್ದಾನೆ ಎನ್ನಲಾಗಿದೆ. ಮತ್ತೊಂದೆಡೆ ಸಾ.ರಾ.ಮಹೇಶ್ ಬೆಂಬಲಿಗನು ಶಾಸಕ ವಿಶ್ವನಾಥ್ ಅವರ ಪುತ್ರ, ಜಿ.ಪಂ.ಸದಸ್ಯ ಅಮಿತ್ ದೇವರಹಟ್ಟಿ ಅವರಿಗೆ ದೂರವಾಣಿ ಕರೆ ಮಾಡಿ ಬೆದರಿಕೆ ಹಾಕಿದ್ದಾನೆ ಎಂದು ತಿಳಿದುಬಂದಿದೆ.

ಬೆದರಿಕೆ ಹಾಕಿದ್ದಾರೆ ಎನ್ನಲಾದ ಈ ಎರಡೂ ಆಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಇಬ್ಬರು ನಾಯಕರ ಬೆಂಬಲಿಗರು ತಮ್ಮ ತಮ್ಮ  ನಾಯಕರುಗಳನ್ನು ಸಮರ್ಥಿಸಿಕೊಳ್ಳುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News